Publish Date: Tue, 24 Apr 2018 (13:25 IST)
Updated Date: Tue, 24 Apr 2018 (13:27 IST)
ಕೊಪ್ಪಳದಲ್ಲಿ ಕೊನೆಗೂ ಬಿಜೆಪಿ ಟಿಕೆಟ್ ಪಡೆದು ಸಂಸದ ಸಂಗಣ್ಣ ಕರಡಿ ಪುತ್ರ ಅಮರೇಶ್ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಸಂಸದ ಸಂಗಣ್ಣ ಕರಡಿ ಪುತ್ರ ಅಮರೇಶ ಕರಡಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.
ಬಿಜೆಪಿ ಎರಡನೆ ಪಟ್ಟಿಯಲ್ಲಿ ಸಿ.ವಿ. ಚಂದ್ರಶೇಖರ ಹೆಸರು ಘೋಷಣೆ ಮಾಡಿತ್ತು.ಆದರೆ ಕೊನೆಗೂ ಪ್ರಯತ್ನ ಮಾಡಿ ಅಮರೇಶ ಬಿ ಫಾರಂ ಪಡೆದುಕೊಂಡಿದ್ದರು. ಇಂದು ಪತ್ನಿ, ಮಗಳೊಂದಿಗೆ ಬಂದು ನಾಮಪತ್ರವನ್ನು ಅಮರೇಶ ಕರಡಿ ಸಲ್ಲಿಸಿದರು.
ಸಿಎಂ ಸಿದ್ದರಾಮಯ್ಯ ಸ್ಪರ್ಧಿಸಿದ್ರೆ, ಬಿಜೆಪಿ ಯಲ್ಲಿ ಬದಲಾವಣೆಯಾಗಬಹುದು. ನಮ್ಮ ತಂದೆಯಾವರು ಸ್ಪರ್ಧಿಸ ಬಹುದು.
ಸಧ್ಯಕ್ಕೆ ನಾನು ನಾಮಪತ್ರ ಸಲ್ಲಿಸಿದ್ದೇನೆನಮ್ಮ ಪಕ್ಷದಲ್ಲಿ ಸಿ.ವಿ. ಚಂದ್ರಶೇಖರ ಅಸಮಧಾನಗೊಂಡಿದ್ದಾರೆ.ಸಿ.ವಿ. ಚಂದ್ರಶೇಖರ ನನ್ನ ಹಿರಿಯ ಸಹೋದರನಿದ್ದಂತೆ. ಅವರನ್ನ ಮನವೊಲಿಸುವ ಕೆಲಸ ಮಾಡುತ್ತೇವೆ ಎಂದು ಅಮರೇಶ ಕರಡಿ ಹೇಳಿದ್ದಾರೆ.