Webdunia - Bharat's app for daily news and videos

Install App

ಅಭಿಮಾನಿ ರಕ್ತದಲ್ಲಿ ಚಿತ್ರ ಬಿಡಿಸಿದ್ದಕ್ಕೆ ಮನವಿ ಮಾಡಿದ ಬಿಗ್ ಬಾಸ್ ವಿನಯ್ ಗೌಡ

Krishnaveni K
ಶುಕ್ರವಾರ, 23 ಫೆಬ್ರವರಿ 2024 (16:01 IST)
Photo Courtesy: Twitter
ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 10 ರ ಪ್ರಬಲ ಸ್ಪರ್ಧಿಯಾಗಿದ್ದ ವಿನಯ್ ಗೌಡ ಅಭಿಮಾನಿಯೊಬ್ಬರ ವರ್ತನೆಯಿಂದ ತಲ್ಲಣಗೊಂಡಿದ್ದಾರೆ.

ಬಿಗ್ ಬಾಸ್ ನಲ್ಲಿ ವಿನಯ್ ನೋಡಿ ಅಪ್ಪಟ ಅಭಿಮಾನಿಯಾಗಿದ್ದ ಯುವಕನೊಬ್ಬ ರಕ್ತದಲ್ಲಿ ವಿನಯ್ ಚಿತ್ರ ಬಿಡಿಸಿ ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ಟ್ಯಾಗ್ ಮಾಡಿದ್ದಾನೆ. ಇದನ್ನು ಗಮನಿಸಿದ ವಿನಯ್ ಅಭಿಮಾನಿಗಳಿಗೆ ಮನವಿಯೊಂದನ್ನು ಮಾಡಿದ್ದಾರೆ.

ಅಭಿಮಾನಿ ಸಿರಿಂಜ್ ಬಳಸಿ ರಕ್ತ ಹೊರತೆಗೆದು ಅದರಿಂದ ವಿನಯ್ ಚಿತ್ರ ಬಿಡಿಸಿದ್ದಾನೆ.  ಆದರೆ ಅಭಿಮಾನಿಯ ವರ್ತನೆ ವಿನಯ್ ಗೆ ಗಾಬರಿ ತಂದಿದೆ. ನಿಮ್ಮ ಅಮೂಲ್ಯವಾದ ರಕ್ತವನ್ನು ಹೀಗೆ ವೇಸ್ಟ್ ಮಾಡಬೇಡಿ ಎಂದು ಅಭಿಮಾನಿಗೆ ಬುದ್ಧಿವಾದ ಹೇಳಿದ್ದಾರೆ.  ದಯವಿಟ್ಟು, ರಕ್ತ ಅಮೂಲ್ಯವಾದುದು. ಅದನ್ನು ಹಾಳು ಮಾಡಬೇಡಿ. ನನ್ನ ಮೇಲೆ ಇಟ್ಟಿರುವ ಪ್ರೀತಿಗೆ ಧನ್ಯವಾದಗಳು. ರಕ್ತ ಬೇಕಾದವರಿಗೆ ದಾನ ಮಾಡಿ. ಆದರೆ ಈ ರೀತಿ ಹಾಳುಮಾಡಬೇಡಿ. ಯಾವ ಅಭಿಮಾನಿಯೂ ಈ ರೀತಿ ಮಾಡಬಾರದು ಎಂದು ವಿನಯ್ ವಿಶೇಷ ಮನವಿ ಮಾಡಿದ್ದಾರೆ.

ಬಿಗ್ ಬಾಸ್ ನಲ್ಲಿ ತಮ್ಮದೇ ಶೈಲಿಯ ಆಟದಿಂದಾಗಿ ವಿನಯ್ ಅನೇಕ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಅಭಿಮಾನಿಗಳ ಅಭಿಮಾನವೆಂದರೆ ಹಾಗೆ. ಕೆಲವೊಮ್ಮೆ ಅದು ಸೆಲೆಬ್ರಿಟಿಗಳಿಗೆ ಕಿರಿ ಕಿರಿಯಾಗುವುದೂ ಇದೆ. ಇದೀಗ ವಿನಯ್ ಗೂ ಅಭಿಮಾನಿಯ ವರ್ತನೆ ತಲ್ಲಣವುಂಟು ಮಾಡಿದೆ.

ಸಂಬಂಧಿಸಿದ ಸುದ್ದಿ

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments