Webdunia - Bharat's app for daily news and videos

Install App

ಪುನರಾರಂಭದ ಚಿಂತೆಯಲ್ಲಿ ಟಿವಿ ಲೋಕ

Webdunia
ಬುಧವಾರ, 6 ಮೇ 2020 (08:49 IST)
ಬೆಂಗಳೂರು: ಲಾಕ್ ಡೌನ್ ಜಾರಿಯಾದ ಬಳಿಕ ಟಿವಿ ಲೋಕ ಸ್ತಬ್ಧವಾಗಿ ತಿಂಗಳ ಮೇಲಾಯಿತು. ವೀಕ್ಷಕರಿಗೆ ತಮ್ಮ ಮೆಚ್ಚಿನ ಕಾರ್ಯಕ್ರಮ ಎಲ್ಲಿ ನಿಂತು ಹೋಗಿತ್ತು ಎಂಬುದೇ ಮರೆತು ಹೋಗಿದೆ. ಹೀಗಿರುವಾಗ ಪುನರಾರಂಭಿಸುವ ಚಿಂತೆಯಲ್ಲಿ ಟಿವಿ ಲೋಕವಿದೆ.


ಒಂದು ಧಾರವಾಹಿಯೇ ಆಗಲಿ, ರಿಯಾಲಿಟಿ ಶೋವೇ ಆಗಲಿ ಕೊನೆಯ ಬಾರಿಗೆ ಏನಾಗಿತ್ತು ಎಂಬುದು ಜನರಿಗೆ ಮರೆತೇ ಹೋಗುವಷ್ಟು ದಿನಗಳಾಗಿವೆ. ಹೀಗಾಗಿ ಎಲ್ಲವನ್ನೂ ಹೊಸದಾಗಿ ಆರಂಭಿಸುವಷ್ಟೇ ಶ್ರದ್ಧೆಯಿಂದ ಆರಂಭಿಸುವ ಹೊಣೆಗಾರಿಕೆ ಟಿವಿ ಲೋಕದ ನಿರ್ಮಾಪಕರು, ನಿರ್ದೇಶಕರ ಮೇಲಿದೆ.

ಇದರ ನಡುವೆ ಮೊದಲಿದ್ದ ಟಿಆರ್ ಪಿ, ವೀಕ್ಷಕರ ಸಂಖ್ಯೆ ಮುಂದೆ ಮರಳಿ ಪಡೆಯುವುದು ಸವಾಲಿನ ಕೆಲಸವಾಗಲಿದೆ. ಹೀಗಾಗಿ ಮತ್ತೆ ಆದಷ್ಟು ಬೇಗ ಶೂಟಿಂಗ್ ಶುರು ಮಾಡಲು ಟಿವಿ ಮಾಧ‍್ಯಮಗಳು ಉತ್ಸುಕವಾಗಿದೆ. ಈಗಾಗಲೇ ಟೆಲಿವಿಷನ್ ಅಸೋಸಿಯೇಷನ್ ಮುಖಾಂತರ ಸಿಎಂಗೆ ಶೂಟಿಂಗ್ ಗೆ ಅವಕಾಶ ಕೊಡಲು ಮನವಿ ಹೋಗಿದ್ದು, ಸರ್ಕಾರ ಷರತ್ತುಬದ್ಧ ಒಪ್ಪಿಗೆ ನೀಡಿದೆ. ಹಾಗಾಗಿ ಶೂಟಿಂಗ್ ಏನೋ ಆರಂಭವಾಗಲಿದೆ. ಆದರೆ ಮತ್ತೆ ಹಳೆಯ ಹಳಿಗೆ ಮರಳುವುದು ಧಾರವಾಹಿ ತಂಡಗಳಿಗೆ ಸವಾಲಿನ ಕೆಲಸವಾಗಲಿದೆ.

ಸಂಬಂಧಿಸಿದ ಸುದ್ದಿ

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments