Select Your Language

Notifications

webdunia
webdunia
webdunia
webdunia

ಧಾರವಾಹಿ ಪ್ರಿಯರಿಗೆ ಸದ್ಯದಲ್ಲೇ ಸಿಹಿ ಸುದ್ದಿ?!

ಧಾರವಾಹಿ ಪ್ರಿಯರಿಗೆ ಸದ್ಯದಲ್ಲೇ ಸಿಹಿ ಸುದ್ದಿ?!
ಬೆಂಗಳೂರು , ಮಂಗಳವಾರ, 5 ಮೇ 2020 (10:10 IST)
ಬೆಂಗಳೂರು: ಲಾಕ್ ಡೌನ್ ನಿಂದಾಗಿ ಮನೆಯಲ್ಲಿರುವಾಗ ಧಾರವಾಹಿಗಳನ್ನು ನೋಡಲೂ ಸಾಧ‍್ಯವಾಗುತ್ತಿಲ್ಲ. ಯಾಕೆಂದರೆ ಹೊಸ ಎಪಿಸೋಡ್ ಗಳ ಶೂಟಿಂಗ್ ನಡೆಯದೇ ಧಾರವಾಹಿಗಳೂ ಹಳೆಯ ಎಪಿಸೋಡ್ ಗಳನ್ನೇ ಮತ್ತೆ ಮತ್ತೆ ಪ್ರಸಾರ ಮಾಡುತ್ತಿವೆ.



ಈ ನಡುವೆ ಧಾರವಾಹಿ ಪ್ರಿಯರಿಗೆ ಸದ್ಯದಲ್ಲೇ ಸಿಹಿ ಸುದ್ದಿ ಕೊಡಲು ಟೆಲಿವಿಷನ್ ಅಸೋಸಿಯೇಷನ್ ಪ್ರಯತ್ನ ನಡೆಸಿದೆ. ಧಾರವಾಹಿಗಳ ಶೂಟಿಂಗ್ ಗೆ ಅನುಮತಿ ನೀಡುವಂತೆ ಟೆಲಿವಿಷನ್ ಅಸೋಸಿಯೇಷನ್ ಸಿಎಂ ಯಡಿಯೂರಪ್ಪಗೆ ಮನವಿ ಸಲ್ಲಿಸಿದೆ.

ಟಿವಿ ಲೋಕದಲ್ಲಿ ಕೆಲಸ ಮಾಡುವ ಸಾವಿರಾರು ಕಾರ್ಮಿಕರು ಈಗ ಶೂಟಿಂಗ್ ಇಲ್ಲದೇ ನಿತ್ಯದ ಅನ್ನಕ್ಕಾಗಿ ಪರದಾಡುತ್ತಿದ್ದಾರೆ. ಹೀಗಾಗಿ ಇವರ ಹಿತದೃಷ್ಟಿಯಿಂದಾದರೂ ಮತ್ತೆ ಶೂಟಿಂಗ್ ಮಾಡಲು ಅವಕಾಶ ಕೊಡಿ ಎಂದು ಮನವಿ ಮಾಡಲಾಗಿದೆ. ಒಂದು ವೇಳೆ ಸಿಎಂ ಇದಕ್ಕೆ ಒಪ್ಪಿಗೆ ಕೊಟ್ಟರೆ ಮತ್ತೆ ಧಾರವಾಹಿಗಳ ಶೂಟಿಂಗ್ ಪ್ರಾರಂಭವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಟ್ವೀಟ್ ನಲ್ಲಿ ತಪ್ಪು ಮಾಡಿ ಡಿಲೀಟ್ ಮಾಡಿದ ಕಿಚ್ಚ ಸುದೀಪ್: ಕಿಚಾಯಿಸಿದ ದರ್ಶನ್ ಅಭಿಮಾನಿಗಳು