Webdunia - Bharat's app for daily news and videos

Install App

ರಿಯಾಲಿಟಿ ಶೋಗೆ ಬಂದ ಪುನೀತ್ ರಾಜ್ ಕುಮಾರ್: ಅಪ್ಪು ನೋಡಿ ಇಡೀ ಸೆಟ್ ಕಣ್ಣೀರು

Krishnaveni K
ಗುರುವಾರ, 25 ಜುಲೈ 2024 (10:42 IST)
Photo Credit: Instagram
ಬೆಂಗಳೂರು: ಕನ್ನಡದಲ್ಲಿ ಗತಿಸಿ ಹೋದ ನಟರ ಪೈಕಿ ಛೇ ಅವರು ಒಮ್ಮೆ ನಮ್ಮ ಕಣ್ಣ ಮುಂದೆ ಬರಬೇಕಿತ್ತು ಎಂದು ಅಭಿಮಾನಿಗಳು ಅಂದುಕೊಳ್ಳುವ ಏಕೈಕ ನಟ ಎಂದರೆ ಪುನೀತ್ ರಾಜ್ ಕುಮಾರ್ ಇರಬಹುದು. ಅಭಿಮಾನಿಗಳ ಪ್ರೀತಿಯ ಅಪ್ಪು ಈಗ ರಿಯಾಲಿಟಿ ಶೋ ಮೂಲಕ ಬರುತ್ತಿದ್ದಾರೆ.

ಜೀ ಕನ್ನಡದಲ್ಲಿ ಪ್ರಸಾರವಾಗುವ ಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್ ಮತ್ತು ಮಹಾನಟಿ ಸಂಗಮದಲ್ಲಿ ಈ ಬಾರಿ ಪುನೀತ್ ರಾಜ್ ಕುಮಾರ್ ಅವರ ಪಾತ್ರವನ್ನು ಕರೆತರಲಾಗಿದೆ. ಸ್ಕಿಟ್ ಒಂದರಲ್ಲಿ ಟೈಮ್ ಮಿಷನ್ ಹಿಂದೆ ಮಾಡಿ ಸ್ಪರ್ಧಿ ಪುನೀತ್ ರಾಜ್ ಕುಮಾರ್ ಅವರನ್ನು ಕರೆತರುವಂತೆ ಸನ್ನಿವೇಶವೊಂದನ್ನು ಸೃಷ್ಟಿಸಲಾಗಿದೆ.

ಈ ವೇಳೆ ಥೇಟ್ ಪುನೀತ್ ಪಾತ್ರಧಾರಿ ವೇದಿಕೆ ಎಂಟ್ರಿ ಕೊಡುತ್ತಾರೆ. ಥೇಟ್ ಪುನೀತ್ ನಂತೇ ಹಾವಭಾವ, ಫೇಸ್ ಕಟ್, ಧ್ವನಿ ಮಾಡಿಕೊಂಡು ವೇದಿಕೆಗೆ ಬಂದಾಗ ಸೆಟ್ ನಲ್ಲಿದ್ದವರೆಲ್ಲರೂ ಕಣ್ಣೀರಾಗುತ್ತಾರೆ. ಆಂಕರ್ ಅನುಶ್ರೀಯಂತೂ ಕಣ್ಣೀರು ಹಾಕುತ್ತಲೇ ಇಡೀ ಶೋ ವೀಕ್ಷಿಸಿದ್ದಾರೆ.

ಇನ್ನು, ಪುನೀತ್ ರನ್ನೇ ಹೋಲುವ ವ್ಯಕ್ತಿಯ ಪ್ರೋಮೋವನ್ನು ವಾಹಿನಿ ಪ್ರಸಾರ ಮಾಡಿದ್ದು ಇದನ್ನು ನೋಡಿದ ನೆಟ್ಟಿಗರೂ ಭಾವುಕರಾಗಿದ್ದಾರೆ. ನಿಜವಾಗಿಯೂ ಈ ರೀತಿ ನಡೆದು ಒಮ್ಮೆ ಪುನೀತ್ ನಮ್ಮ ಎದುರು ಬಂದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎಂದು ಆಸೆಪಟ್ಟಿದ್ದಾರೆ. ಬಳಿಕ ಪುನೀತ್ ರಂತೇ ನೃತ್ಯ ಮಾಡಿ ಅಲ್ಲಿದ್ದವರನ್ನು ರಂಜಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಕಾಂತಾರ ಸಿನಿಮಾ ಶೂಟಿಂಗ್‌ ಅವಘಡ ಸಂಬಂಧ ಹೊಂಬಾಳೆ ಫಿಲ್ಮ್ಸ್‌ ಸ್ಪಷ್ಟನೆ

Revanth Reddy: ಅಂದು ಜೈಲಿಗಟ್ಟಿದ್ದ ನಟನಿಗೆ ಇಂದು ಕೈಯಾರೆ ಕೊಡಬೇಕಾಯಿತು ಉತ್ತಮ ನಟ ಪ್ರಶಸ್ತಿ

ಕಾಂತಾರ ಪ್ರೀಕ್ವೆಲ್‌ ಚಿತ್ರೀಕರಣದ ವೇಳೆ ಮಗುಚಿದ ದೋಣಿ: ಅಪಾಯದಿಂದ ಪಾರಾದ ರಿಷಭ್‌ ಶೆಟ್ಟಿ ಮತ್ತು ತಂಡ

ಮೀಮ್ಸ್‌, ಟ್ರೋಲ್‌ಗಳು ನನ್ನನ್ನು ವ್ಯಾಖ್ಯಾನಿಸುವುದಿಲ್ಲ: ಕಾಲೆಳೆದ ನೆಟ್ಟಿಗರಿಗೆ ಬಿಪಾಶಾ ಕ್ಲಾಸ್‌

ಚಿತ್ರರಂಗದಿಂದ ಬ್ಯಾನ್ ಆಗಿದ್ದಕ್ಕೆ ಈ ಸ್ಟಾರ್ ನಟನ ಮೊರೆ ಹೋದ ಮಡೆನೂರು ಮನು

ಮುಂದಿನ ಸುದ್ದಿ
Show comments