Select Your Language

Notifications

webdunia
webdunia
webdunia
webdunia

ಸಾವಿಗೆ ಒಂದು ದಿನ ಮುಂಚೆ ಮೂರು ಪೋಸ್ಟ್: ಸೌಜನ್ಯ ಸಾವಿನ ಹಿಂದೆ ಅನುಮಾನ

ಸಾವಿಗೆ ಒಂದು ದಿನ ಮುಂಚೆ ಮೂರು ಪೋಸ್ಟ್: ಸೌಜನ್ಯ ಸಾವಿನ ಹಿಂದೆ ಅನುಮಾನ
ಬೆಂಗಳೂರು , ಗುರುವಾರ, 30 ಸೆಪ್ಟಂಬರ್ 2021 (17:25 IST)
ಬೆಂಗಳೂರು: ಕಿರುತೆರೆ ನಟಿ ಸೌಜನ್ಯ ಆತ್ಮಹತ್ಯೆ ಪ್ರಕರಣದ ಬಗ್ಗೆ ಪೊಲೀಸರಿಗೆ ಅನುಮಾನ ಮೂಡಿದೆ. ಇದು ಆತ್ಮಹತ್ಯೆಯೋ, ಕೊಲೆಯೋ ಎಂಬ ನಿಟ್ಟಿನಲ್ಲಿ ತನಿಖೆ ನಡೆಸುತ್ತಿದ್ದಾರೆ.


ನೇಣು ಬಿಗಿದಿಕೊಂಡಿದ್ದರೂ ಸೌಜನ್ಯ ಕುತ್ತಿಗೆ ಭಾಗದಲ್ಲಿ ಗಾಯವಾಗಿಲ್ಲ, ಬಾಯಿ ತೆರೆದ ಸ್ಥಿತಿಯಲ್ಲಿರಲಿಲ್ಲ. ಇನ್ನು, ಎರಡು-ಮೂರು ಬಾರಿ ಡೆತ್ ನೋಟ್ ಬರೆಯಲಾಗಿದೆ. ಇದೆಲ್ಲಾ ಪೊಲೀಸರ ಅನುಮಾನಕ್ಕೆ ಕಾರಣವಾಗಿದೆ.

ಸಾವಿಗೆ ಕೇವಲ ಒಂದು ದಿನ ಮುಂಚೆ ಅಂದರೆ ನಿನ್ನೆಯಷ್ಟೇ ಸೌಜನ್ಯ ತಮ್ಮ ಇನ್ ಸ್ಟಾಗ್ರಾಂ ಪುಟದಲ್ಲಿ ಮೂರು ಫೋಟೋ ಪ್ರಕಟಿಸಿದ್ದರು. ಇದರಲ್ಲಿ ಕೊನೆಯ ಫೋಟೋ ಕುಟುಂಬದ ಜೊತೆಗಿದ್ದ ಸಂತೋಷದ ಕ್ಷಣದ ಫೋಟೋ. ಈ ಫೋಟದಲ್ಲಿ ಸೌಜನ್ಯ ತಮ್ಮ ಕುಟುಂಬದವರಿಗೆ ಧನ್ಯವಾದ ಸಲ್ಲಿಸಿದ್ದಾರೆ. ಇನ್ನು, ಇದಕ್ಕೂ ಮೊದಲು ಪ್ರಕಟಿಸಿದ ಎರಡು ಫೋಟೋಗಳಲ್ಲಿ ತಮಗೆ ಬೆಂಬಲವಾಗಿ ನಿಂತ ಸ್ನೇಹಿತರಿಗೆ ಧನ್ಯವಾದ ಸಲ್ಲಿಸಿದ್ದಾರೆ. ಪೊಲೀಸರು ಈಗ ಈ ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಡೆತ್ ನೋಟ್ ಬರೆದಿಟ್ಟು ಸಾವನ್ನಪ್ಪಿದ ಕಿರುತೆರೆ ನಟಿ ಸೌಜನ್ಯ