Select Your Language

Notifications

webdunia
webdunia
webdunia
webdunia

ಅನಿರುದ್ಧ್ ಇಲ್ಲದೇ ಸೀರಿಯಲ್ ನೋಡಲ್ಲ: ಕಿರುತೆರೆಯಲ್ಲೂ ಬಾಯ್ಕಾಟ್ ಟ್ರೆಂಡ್ ಶುರು

ಅನಿರುದ್ಧ್ ಇಲ್ಲದೇ ಸೀರಿಯಲ್ ನೋಡಲ್ಲ: ಕಿರುತೆರೆಯಲ್ಲೂ ಬಾಯ್ಕಾಟ್ ಟ್ರೆಂಡ್ ಶುರು
ಬೆಂಗಳೂರು , ಶನಿವಾರ, 20 ಆಗಸ್ಟ್ 2022 (21:03 IST)
ಬೆಂಗಳೂರು: ಜೊತೆ ಜೊತೆಯಲಿ ಧಾರವಾಹಿ ತಂಡದಲ್ಲಿ ನಡೆಯುತ್ತಿರುವ ಕಲಹದಿಂದಾಗಿ ಅನಿರುದ್ಧ್ ಜತ್ಕಾರ್ ಅವರನ್ನು ಧಾರವಾಹಿಯಿಂದ ಹೊರ ಹಾಕಲಾಗಿದೆ.

ಆರ್ಯವರ್ಧನ್ ಪಾತ್ರದ ಮೂಲಕ ಅನಿರುದ್ಧ್ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ. ಅವರ ಹೆಸರಲ್ಲಿ ಅನೇಕ ಫ್ಯಾನ್ ಪೇಜ್ ಗಳಿವೆ. ಈಗ ಅನಿರುದ್ಧ್ ಇಲ್ಲದೇ ಈ ಅಭಿಮಾನಿಗಳಿಗೆ ಜೊತೆ ಜೊತೆಯಲಿ ಧಾರವಾಹಿ ಕಲ್ಪಿಸಿಕೊಳ್ಳಲೂ ಕಷ್ಟವಾಗುತ್ತಿದೆ.

ಹೀಗಾಗಿ ಸಿಡಿಪಿ, ಸಂದೇಶಗಳ ಮೂಲಕ ನಮಗೆ ಆರ್ಯವರ್ಧನ್ ಪಾತ್ರದಲ್ಲಿ ಅನಿರುದ್ಧ್ ಅವರೇ ಬೇಕು. ಅವರು ಇಲ್ಲಾಂದ್ರೆ ಜೊತೆ ಜೊತೆಯಲಿ ಧಾರವಾಹಿ ಮಾತ್ರವಲ್ಲ, ಜೀ ವಾಹಿನಿಯನ್ನೂ ಬಾಯ್ಕಾಟ್ ಮಾಡುವುದಾಗಿ ಟ್ರೆಂಡ್ ಶುರು ಮಾಡಿಕೊಂಡಿದ್ದಾರೆ. ಇದು ಎಲ್ಲಿಯವರೆಗೆ ಮುಟ್ಟುತ್ತದೆ ಎಂದು ಕಾದುನೋಡಬೇಕಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಗಂಡು ಮಗುವಿಗೆ ಜನ್ಮವಿತ್ತ ನಟಿ ಸೋನಂ ಕಪೂರ್