Webdunia - Bharat's app for daily news and videos

Install App

ಸುದೀಪ್ ಎದುರಲ್ಲೇ ಮಾಜಿ ಪತ್ನಿ ಬಗ್ಗೆ ಕಿತ್ತಾಡಿಕೊಂಡ ಚಕ್ರವರ್ತಿ ಚಂದ್ರೂಡ-ಮಂಜು ಪಾವಗಡ

Webdunia
ಸೋಮವಾರ, 28 ಜೂನ್ 2021 (14:55 IST)
ಬೆಂಗಳೂರು: ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಸ್ಪರ್ಧಿಯಾಗಿರುವ ಚಕ್ರವರ್ತಿ ಚಂದ್ರಚೂಡ್ ಹಿಂದೊಮ್ಮೆ ನಟಿ ಶ್ರುತಿ ಅವರನ್ನು ವಿವಾಹವಾಗಿ ಬಳಿಕ ಬೇರೆಯಾಗಿರುವ ವಿಚಾರ ಎಲ್ಲರಿಗೂ ಗೊತ್ತೇ ಇದೆ.


ಇಬ್ಬರ ವಿವಾಹ ಭಾರೀ ವಿವಾದವಾಗಿತ್ತು. ಬಳಿಕ ಚಂದ್ರಚೂಡ್ ಮೊದಲನೇ ಪತ್ನಿಯ ಆಕ್ಷೇಪದ ಬಳಿಕ ಶ್ರುತಿ ತಾವಾಗಿಯೇ ಚಂದ್ರಚೂಡ್ ರಿಂದ ಬೇರೆಯಾಗಿದ್ದರು. ಈ ವಿಚಾರ ಈಗ ಬಿಗ್ ಬಾಸ್ ಮನೆಯಲ್ಲಿ ಪ್ರತಿಧ್ವನಿಸಿದೆ.

ಸುದೀಪ್ ಎದುರು ಮಾತುಕತೆ ನಡೆಯುವಾಗ ಚಂದ್ರಚೂಡ್ ಇನ್ನೊಬ್ಬ ಸ್ಪರ್ಧಿ ಮಂಜು-ದಿವ್ಯಾ ಸುರೇಶ್ ನಡುವಿನ ಸ್ನೇಹದ ಬಗ್ಗೆ ಆಕ್ಷೇಪದಿಂದ ಮಾತನಾಡಿದ್ದಾರೆ. ಇದು ಮಂಜು ಅವರನ್ನು ಕೆರಳಿಸಿದೆ. ಹೆಣ್ಣಿನ ಬಗ್ಗೆ ಮಾತನಾಡುವ ಇವರು ಎಲ್ಲಿಂದ ಹೇಗೆ ಬಂದರು ಎಂದೆಲ್ಲಾ ನನಗೂ ಗೊತ್ತಿದೆ ಎಂದರು. ಇದರ ಅರ್ಥವೇನು ಎಂದು ಸುದೀಪ್  ಪ್ರಶ್ನಿಸಿದಾಗ ಅವರ ಮದುವೆ ಬಗ್ಗೆ ಹೇಳುತ್ತಿದ್ದೇನೆ ಎಂದು ಮಂಜು ಹೇಳಿದ್ದಾರೆ.

ಇದು ಚಂದ್ರಚೂಡ್ ರನ್ನು ಕೆರಳಿಸಿದೆ. ನನ್ನ ಜೀವನವನ್ನು ಈ ಮನುಷ್ಯ ಏನು ನೋಡಿದ್ದಾನೆ. ನನಗೆ ಎರಡು ಡಿವೋರ್ಸ್ ಆಗಿದೆ. ಸ್ಟಾರ್ ನಟಿಗೆ ವಿಚ್ಛೇದನ ನೀಡಿದ್ದೇನೆ. ಅದೂ ಕಾನೂನು ಪ್ರಕಾರವೇ ವಿಚ್ಛೇದನ ನೀಡಿದ್ದೇನೆ. ನಾಟಕ ಮಾಡಿಲ್ಲ. ಇದಕ್ಕೆ ನಾನು ಬೇರೆ ಕಡೆ ಉತ್ತರ ನೀಡುತ್ತೇನೆ. ನನ್ನ ಹೆಂಡತಿಯರ ಬಗ್ಗೆ ಮಾತನಾಡುತ್ತಾನೆ’ ಎಂದು ಹರಿಹಾಯ್ದಿದ್ದಾರೆ.

ಸಂಬಂಧಿಸಿದ ಸುದ್ದಿ

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments