Webdunia - Bharat's app for daily news and videos

Install App

ಹುಡುಗಿಯರ ಹೃದಯ ಚೂರು ಮಾಡಿದ ‘ಅಗ್ನಿಸಾಕ್ಷಿ’ ಸಿದ್ಧಾರ್ಥ್!

Webdunia
ಭಾನುವಾರ, 27 ಜನವರಿ 2019 (09:12 IST)
ಬೆಂಗಳೂರು: ಅಗ್ನಿಸಾಕ್ಷಿ ಧಾರವಾಹಿಯ ಗುಳಿ ಕೆನ್ನೆಯ ಹೀರೋ ಸಿದ್ಧಾರ್ಥ್ ಅಲಿಯಾಸ್ ವಿಜಯ್ ಸೂರ್ಯ ಅದೇ ಧಾರವಾಹಿಯ ಸನ್ನಿಧಿಯನ್ನು ಮದುವೆಯಾಗಲಿ ಎಂದು ಅಭಿಮಾನಿಗಳು ಹಾರೈಸಿದ್ದರು.


ಇವರಿಬ್ಬರೂ ನಿಜ ಜೀವನದಲ್ಲೂ ಪ್ರೇಮಿಗಳು ಎಂದು ಸಾಕಷ್ಟು ಸಲ ಗಾಸಿಪ್ ಬಂದಿತ್ತು. ಅಷ್ಟೇ ಅಲ್ಲದೆ, ಸಾಕಷ್ಟು ಹುಡುಗಿಯರೂ ವಿಜಯ್ ಸೂರ್ಯರನ್ನು ಇಷ್ಟಪಟ್ಟಿದ್ದರು. ಆದರೆ ಇದೀಗ ಸಿದ್ಧಾರ್ಥ್ ಇವರೆಲ್ಲರ ಹೃದಯ ಚೂರು ಮಾಡುವ ಸುದ್ದಿ ಹೇಳಿದ್ದಾರೆ.

ಹೌದು. ಇದೇ ವರ್ಷ ಫೆಬ್ರವರಿ 14 ಅಂದರೆ ಪ್ರೇಮಿಗಳ ದಿನದಂದು ವಿಜಯ್ ಸೂರ್ಯ ವಿವಾಹವಾಗುತ್ತಿದ್ದಾರೆ. ಆದರೆ ಸನ್ನಿಧಿಯನ್ನು ಅಂತೂ ಅಲ್ಲ! ವಿಜಯ್ ಕೈ ಹಿಡಿಯಲಿರುವ ಹುಡುಗಿ ಹೆಸರು ಚೈತ್ರ. ಈಕೆ ಮತ್ತು ವಿಜಯ್ ಕುಟುಂಬದವರು ಸುಮಾರು ವರ್ಷಗಳಿಂದ ಸ್ನೇಹಿತರಂತೆ. ಇದೀಗ ಎರಡೂ ಮನೆಯವರು ಒಪ್ಪಿಕೊಂಡು ಈ ಮದುವೆ ಮಾಡುತ್ತಿದ್ದಾರೆ. ಅಂದರೆ ಇದು ಪಕ್ಕಾ ಅರೇಂಜ್ಡ್ ಮ್ಯಾರೇಜ್.

ಅದೇನೇ ಇದ್ದರೂ ವಿಜಯ್ ಈ ಸುದ್ದಿ ಬಹಿರಂಗಪಡಿಸಿದಾಗಿನಿಂದ ಇನ್ ಸ್ಟಾಗ್ರಾಂನ ಅವರ ಅಭಿಮಾನಿ ಗ್ರೂಪ್ ಗಳಲ್ಲಿ, ಹುಡುಗಿಯರು ತಮಗೇ ಸಿಗದ ಹುಡುಗನಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಇದು ಗುಡ್ ನ್ಯೂಸ್ ಅಲ್ಲ, ಬ್ಯಾಡ್ ನ್ಯೂಸ್ ಎನ್ನುತ್ತಿದ್ದಾರೆ. ಕನಿಷ್ಠ ಸನ್ನಿಧಿಯನ್ನಾದರೂ ಮದುವೆಯಾಗಬಹುದಿತ್ತಲ್ಲಾ ಎಂದು ಕಾಮೆಂಟ್ ಮಾಡುತ್ತಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ಸಂಬಂಧಿಸಿದ ಸುದ್ದಿ

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments