Select Your Language

Notifications

webdunia
webdunia
webdunia
webdunia

ಆರು ವರ್ಷವಾದರೂ ನಿಲ್ಲಲಿಲ್ಲ ಅಗ್ನಿಸಾಕ್ಷಿ ಧಾರವಾಹಿ

ಆರು ವರ್ಷವಾದರೂ ನಿಲ್ಲಲಿಲ್ಲ ಅಗ್ನಿಸಾಕ್ಷಿ ಧಾರವಾಹಿ
ಬೆಂಗಳೂರು , ಬುಧವಾರ, 4 ಡಿಸೆಂಬರ್ 2019 (10:54 IST)
ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಗ್ನಿಸಾಕ್ಷಿ ಧಾರವಾಹಿ ಆರು ವರ್ಷ ಪೂರೈಸಿದೆ. ವೀಕ್ಷಕರು ಸಾಮಾಜಿಕ ಜಾಲತಾಣಗಳ ಮೂಲಕ ಈ ಧಾರವಾಹಿಯನ್ನು ನಿಲ್ಲಿಸಿಬಿಡಿ ಎಂದು ಎಷ್ಟೇ ಕೇಳಿಕೊಂಡರೂ ವಾಹಿನಿ ಮಾತ್ರ ಇದನ್ನು ನಿಲ್ಲಿಸುವ ಮೂಡ್ ನಲ್ಲಿರುವಂತೆ ಕಾಣುತ್ತಿಲ್ಲ.


ಈಗಾಗಲೇ ನಾಯಕ ವಿಜಯ್ ಸೂರ್ಯ ಬೇರೊಂದು ಧಾರವಾಹಿಗೆ ಹೋಗಿದ್ದರೆ, ವಿಲನ್ ಚಂದ್ರಿಕಾ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಯಾಗಿದ್ದಾರೆ. ನಾಯಕ, ವಿಲನ್ ಧಾರವಾಹಿ ಬಿಟ್ಟು ಹೋದರೂ ಬೇರೆ ಬೇರೆ ಕತೆ ಮಾಡಿಕೊಂಡು ಧಾರವಾಹಿಯನ್ನೂ ಇನ್ನೂ ಮುಂದುವರಿಸಲಾಗುತ್ತಿದೆ. ಇದಕ್ಕೆ ವೀಕ್ಷಕರು ಹಿಗ್ಗಾ ಮುಗ್ಗಾ ಟೀಕೆ ಮಾಡುತ್ತಿದ್ದಾರೆ.

ಇದೆಲ್ಲದರ ನಡುವೆಯೂ ವಾಹಿನಿ ಮಾತ್ರ ಅಗ್ನಿಸಾಕ್ಷಿಯನ್ನು ಮುಕ್ತಾಯಗೊಳಿಸುತ್ತಿಲ್ಲ. ಸದ್ಯಕ್ಕೆ ವಾರದ ಟಿಆರ್ ಪಿ ಪಟ್ಟಿಯಲ್ಲಿ ಇದು ಅಗ್ರ 15 ರೊಳಗೇ ಸ್ಥಾನ ಪಡೆಯುತ್ತಿದೆ. ಅದೇ ಕಾರಣಕ್ಕಾಗಿಯೋ ಏನೋ ಈ ಧಾರವಾಹಿ ಇನ್ನೂ ಎಳೆದಾಡುತ್ತಲೇ ಇದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಜೀ ಕನ್ನಡ ಸರಿಗಮಪ ಶೋಗೆ ಅಡಿಷನ್ ಶುರು