ಪ್ಯಾರಿಸ್ ಒಲಿಂಪಿಕ್ಸ್ ಕುಸ್ತಿ ಫೈನಲ್ ಗೇರಿದ್ದ ವಿನೇಶ್ ಫೋಗಟ್ ಗೆ ಆಘಾತ: ಫೈನಲ್ ನಿಂದ ಅನರ್ಹ, ಪದಕ ಕನಸು ಭಗ್ನ

Krishnaveni K
ಬುಧವಾರ, 7 ಆಗಸ್ಟ್ 2024 (12:35 IST)
ಪ್ಯಾರಿಸ್: ನಿನ್ನೆಯಷ್ಟೇ ಒಂದೇ ದಿನ ಮೂವರು ಸ್ಪರ್ಧಿಗಳನ್ನು ಮಣ್ಣು ಮುಕ್ಕಿಸಿ ಪ್ಯಾರಿಸ್ ಒಲಿಂಪಿಕ್ಸ್ ಮಹಿಳೆಯರ 50 ಕೆ.ಜಿ. ಕುಸ್ತಿ ವಿಭಾಗದಲ್ಲಿ ಫೈನಲ್ ತಲುಪಿದ್ದ ಭಾರತದ ಸಿಂಹಿಣಿ ವಿನೇಶ್ ಫೋಗಟ್ ಗೆ ಈಗ ಆಘಾತ ಎದುರಾಗಿದೆ. ಕೊನೆಯ ಕ್ಷಣದಲ್ಲಿ ಆಕೆಯನ್ನು ಫೈನಲ್ ನಿಂದ ಅನರ್ಹಗೊಳಿಸಲಾಗಿದೆ.

ವಿನೇಶ್ ಫೋಗಟ್ ಕುಸ್ತಿ ಫೆಡರೇಷನ್ ವಿರುದ್ಧ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಪ್ರಮುಖ ತಾರೆಯರಾಗಿದ್ದರು. ಹೀಗಾಗಿ ಆಕೆಯ ಗೆಲುವನ್ನು ಕೇಂದ್ರ ಸರ್ಕಾರಕ್ಕೆ ಆದ ಮುಖಭಂಗ ಎಂದೇ ಹಲವರು ಟೀಕಿಸಿದ್ದರು. ಈಕೆ ಪದಕ ಗೆದ್ದರೆ ಮೋದಿ ಯಾವ ಬಾಯಿಯಿಂದ ಆಕೆಗೆ ಶುಭ ಹಾರೈಸುತ್ತಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವ್ಯಂಗ್ಯ ಮಾಡಿದ್ದರು.

 ಆದರೆ ಇದೀಗ ಆಕೆಯನ್ನು ಕುಸ್ತಿ ಫೈನಲ್ ನಿಂದಲೇ ಅನರ್ಹಗೊಳಿಸಲಾಗಿದೆ. ಇದಕ್ಕೆ ಕಾರಣ ಆಕೆಯ ದೇಹ ತೂಕ. 50 ಕೆ.ಜಿ.  ವಿಭಾಗದಲ್ಲಿ ಸ್ಪರ್ಧಿಸಿದ್ದ ವಿನೇಶ್ 100 ಗ್ರಾಂನಷ್ಟು ತೂಕ ಹೆಚ್ಚಿದ್ದಾರೆ ಎಂಬ ಕಾರಣಕ್ಕೆ ಅವರನ್ನು ಫೈನಲ್ ನಿಂದ ಅನರ್ಹಗೊಳಿಸಲಾಗಿದೆ.

ವಿನೇಶ್ ಮೂಲಕ ಭಾರತ ಚಿನ್ನ ಅಥವಾ ರಜತ ಪದಕ ನಿರೀಕ್ಷಿಸಿತ್ತು. ಆಕೆಯ ಗೆಲುವು ಇಡೀ ಕುಸ್ತಿ ಫೆಡರೇಶನ್ ವಿರುದ್ಧ ಹೋರಾಡಿದ ಆಟಗಾರ್ತಿಯರ ಗೆಲುವಾಗಲಿದೆ ಎಂದು ಸಂಭ್ರಮಿಸಲಾಗಿತ್ತು. ಆದರೆ ಈಗ ಆಕೆಯನ್ನು ಫೈನಲ್ ನಿಂದಲೇ ಒಲಿಂಪಿಕ್ಸ್ ಸಮಿತಿ ಅನರ್ಹಗೊಳಿಸಿದೆ.

ಇದರೊಂದಿಗೆ ಈ ವಿಭಾಗದಲ್ಲಿ ಯಾವುದೇ ಸ್ಪರ್ಧಿ ಬೆಳ್ಳಿ ಪದಕ ಗೆಲ್ಲುತ್ತಿಲ್ಲ. ಫೈನಲ್ ನಲ್ಲಿ ಆಡಬೇಕಿದ್ದ ಇನ್ನೊಬ್ಬ ಕುಸ್ತಿ ಪಟು ಚಿನ್ನದ ಪದಕ ವಿಜೇತರಾಗಲಿದ್ದಾರೆ. ಪದಕ ಗೆಲ್ಲುವ ಕನಸಿನಲ್ಲಿದ್ದ ವಿನೇಶ್ ಗೆ ಇದು ಅಕ್ಷರಶಃ ಆಘಾತವಾಗಿದೆ. ಆಕೆ ನಿನ್ನೆ ಆಡಿದ ಪರಿ ನೋಡಿದರೆ ಪದಕಕ್ಕೆ ಅರ್ಹರಾಗಿದ್ದರು. ಆದರೆ ಫೈನಲ್ ತಲುಪಿದ ಮೇಲೆ ಅನರ್ಹ ಹಣೆ ಪಟ್ಟಿ ಹೊತ್ತಿರುವುದು ನಿಜಕ್ಕೂ ದುರದೃಷ್ಟಕರ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಕ್ರಿಕೆಟ್ ಸುಂದರಿ ಸ್ಮೃತಿ ಮಂಧಾನ ಮದುವೆ ಕಾರ್ಡ್ ಫೋಟೋ ವೈರಲ್

IND vs SA Test: ಟೀಂ ಇಂಡಿಯಾ ಪ್ಲೇಯಿಂಗ್ ಇಲೆವೆನ್ ಹೇಗಿರಲಿದೆ

ಜೀವ ಭಯಕ್ಕೆ ಪಾಕಿಸ್ತಾನದಿಂದ ವಾಪಸ್ ಆಗ್ತೀವಿ ಎಂದ ಶ್ರೀಲಂಕಾ ಕ್ರಿಕೆಟಿಗರು: ಬರಬೇಡಿ ಅಂತಿದೆ ಕ್ರಿಕೆಟ್ ಬೋರ್ಡ್

ಮೊದಲ ಮದುವೆಯ ವರ್ಷದೊಳಗೆ ಎರಡನೇ ಮದುವೆಯಾದ ಅಫ್ಘಾನ್ ಕ್ರಿಕೆಟರ್ ರಶೀದ್ ಖಾನ್‌

ಆರ್‌ಸಿಬಿ ಅಭಿಮಾನಿಗಳಿಗೆ ಶಾಕ್‌ : ಚಿನ್ನಸ್ವಾಮಿಯಿಂದಲೇ ಪಂದ್ಯಗಳು ಶಿಫ್ಟ್‌ ಸಾಧ್ಯತೆ

ಮುಂದಿನ ಸುದ್ದಿ
Show comments