Webdunia - Bharat's app for daily news and videos

Install App

ಪಾಕಿಸ್ತಾನದ ಅರ್ಷದ್ ನದೀಮ್ ಆಹ್ವಾನಿಸಿದ್ದ ನೀರಜ್ ಚೋಪ್ರಾರನ್ನು ದೇಶದ್ರೋಹಿ ಎಂದು ಕರೆದ ಜನ

Krishnaveni K
ಶುಕ್ರವಾರ, 25 ಏಪ್ರಿಲ್ 2025 (12:48 IST)
ನವದೆಹಲಿ: ಭಾರತದ ಖ್ಯಾತ ಜ್ಯಾವೆಲಿನ್ ಥ್ರೋ ಪಟು ನೀರಜ್ ಚೋಪ್ರಾ ಪಾಕಿಸ್ತಾನದ ಜ್ಯಾವೆಲಿನ್ ಥ್ರೋ ಪಟು ಅರ್ಷದ್ ನದೀಮ್ ರನ್ನು ಆಹ್ವಾನಿಸಿದ್ದಕ್ಕೆ ಈಗ ಅವರಿಗೆ ದೇಶದ್ರೋಹಿ ಎಂದು ಜರೆಯಲಾಗುತ್ತಿದೆ. ಈ ಬಗ್ಗೆ ಅವರೇ ಸ್ಪಷ್ಟನೆ ನೀಡಿದ್ದಾರೆ.

ಪಹಲ್ಗಾಮ್ ದಾಳಿಯ ಬಳಿಕ ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಬಂಧ ಹದಗೆಟ್ಟಿದೆ. ಇದರ ನಡುವೆಯೇ ನೀರಜ್ ಎನ್ ಸಿ ಕ್ಲಾಸಿಕ್ ಟೂರ್ನಿಗೆ ಪಾಕಿಸ್ತಾನದ ಜ್ಯಾವೆಲಿನ್ ಥ್ರೋ ಪಟು ಅರ್ಷದ್ ನದೀಮ್ ಗೆ ಆಹ್ವಾನವಿತ್ತಿದ್ದರು. ಅರ್ಷದ್ ಜೊತೆಗೆ ನೀರಜ್ ಚೋಪ್ರಾ ಉತ್ತಮ ಬಾಂಧವ್ಯವಿಟ್ಟುಕೊಂಡಿದ್ದಾರೆ.

ಆದರೆ ಇದೀಗ ಪಹಲ್ಗಾಮ್ ದಾಳಿಯ ಹಿನ್ನಲೆಯಲ್ಲಿ ಪಾಕಿಸ್ತಾನದ ಕ್ರೀಡಾಳುವನ್ನು ಆಹ್ವಾನಿಸಿರುವುದಕ್ಕೆ ನೀರಜ್ ಚೋಪ್ರಾರನ್ನು ದೇಶದ್ರೋಹಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಟಾರ್ಗೆಟ್ ಮಾಡಲಾಗುತ್ತಿದೆ. ಇದೆಲ್ಲಾ ಬೆಳವಣಿಗೆ ಹಿನ್ನಲೆಯಲ್ಲಿ ಅವರು ಈಗ ಟ್ವೀಟ್ ಮೂಲಕ ಸ್ಪಷ್ಟನೆ ನೀಡಿದ್ದಾರೆ.

ಅರ್ಷದ್ ರನ್ನು ನಾನು ಆಹ್ವಾನಿಸಿದ ಕಾರಣಕ್ಕೆ ದೇಶದ್ರೋಹಿಯಾಗಿದ್ದೇನೆ. ಆದರೆ ಅರ್ಷದ್ ರನ್ನು ಆಹ್ವಾನಿಸಿದ್ದು ಪಹಲ್ಗಾಮ್ ದಾಳಿಗೆ ಮುನ್ನ. ಆದರೆ ಈಗ ನನಗೆ ದೇಶಕ್ಕಿಂತ ಮುಖ್ಯ ಯಾವುದೂ ಇಲ್ಲ. ಹಾಗಿದ್ದರೂ ನನ್ನನ್ನು ಮತ್ತು ನನ್ನ ಕುಟುಂಬದರವನ್ನು ದೇಶದ್ರೋಹಿ ಎಂದು ಟಾರ್ಗೆಟ್ ಮಾಡಲಾಗುತ್ತಿದೆ. ಇದು ನನಗೆ ಬೇಸರ ತಂದಿದೆ. ನಾನು ಹೆಚ್ಚಾಗಿ ಮೌನವಾಗಿರುವ ವ್ಯಕ್ತಿ. ಹಾಗಂತ ನನಗೆ ದೇಶದ ಬಗ್ಗೆ ಅಭಿಮಾನವಿಲ್ಲ ಎಂದಲ್ಲ. ಈಗ ಪಹಲ್ಗಾಮ್ ದಾಳಿಯ ಬಳಿಕ ಅರ್ಷದ್ ಟೂರ್ನಿಯ ಭಾಗವಾಗುವ ಪ್ರಶ್ನೆಯೇ ಬರುವುದಿಲ್ಲ. ನಾನು ಇಷ್ಟು ವರ್ಷಗಳಿಂದ ದೇಶಕ್ಕೆ ಹೆಮ್ಮೆಯಿಂದ ಸೇವೆ ಸಲ್ಲಿಸಿದ್ದೇನೆ.  ಇಂದು ನನ್ನ ದೇಶಭಕ್ತಿಯನ್ನು ಪ್ರಶ್ನಿಸಲಾಗುತ್ತಿದೆ. ಇದು ನನಗೆ ನೋವು ತಂದಿದೆ ಎಂದು ಸುದೀರ್ಘ ಸಂದೇಶ ಬರೆದುಕೊಂಡಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ENG vs IND Test: ಭಾರತದ ಬೌಲರ್‌ಗಳ ವಿರುದ್ಧ ಗಂಭೀರ ಆರೋಪ ಎಸಗಿದ ಪಾಕ್‌ ವೇಗಿ

ಇಂಗ್ಲೆಂಡ್ ಟೆಸ್ಟ್ ಸರಣಿಯಲ್ಲಿ ಸ್ಟಾರ್ ಆಗಿದ್ದರೂ ಕೆಎಲ್ ರಾಹುಲ್ ಗೆ ಹೀಗ್ಯಾಕೆ

ನೀವು ಗ್ರೇಟ್‌: ಸಿರಾಜ್‌ಗೆ ಭಾವನಾತ್ಮಕ ಸಂದೇಶ ಕಳುಹಿಸಿದ ವಿರಾಟ್ ಕೊಹ್ಲಿ ಸಹೋದರಿ

ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ 2027 ರ ವಿಶ್ವಕಪ್ ಕನಸಿಗೆ ಬಿಸಿಸಿಐ ಕೊಳ್ಳಿ

ಓವಲ್ ಟೆಸ್ಟ್ ನಲ್ಲಿ ಭಾರತದ ವಿರುದ್ಧ ಮೋಸದಾಟದ ಆರೋಪ ಹೊರಿಸಿದ ಪಾಕ್ ಕ್ರಿಕೆಟಿಗ

ಮುಂದಿನ ಸುದ್ದಿ
Show comments