Select Your Language

Notifications

webdunia
webdunia
webdunia
webdunia

ಕೊರೋನಾಗೆ ದೇಣಿಗೆ ನೀಡಲು ಗೆದ್ದ ಟ್ರೋಫಿಗಳನ್ನು ಮಾರಿದ ಕ್ರೀಡಾಪಟು

ಕೊರೋನಾಗೆ ದೇಣಿಗೆ ನೀಡಲು ಗೆದ್ದ ಟ್ರೋಫಿಗಳನ್ನು ಮಾರಿದ ಕ್ರೀಡಾಪಟು
ನವದೆಹಲಿ , ಬುಧವಾರ, 8 ಏಪ್ರಿಲ್ 2020 (09:57 IST)
ನವದೆಹಲಿ: ಕೊರೋನಾ ಪರಿಹಾರ ದೇಣಿಗೆಗೆ ಭಾರತದ ಕ್ರೀಡಾ ಕ್ಷೇತ್ರದ ಕೊಡುಗೆ ಅಪಾರ. ಅದರಲ್ಲೂ ಭಾರತದ ಗಾಲ್ಫರ್ ಅರ್ಜುನ್ ಭಾಟಿಯಂತೂ ತಾವು ಗೆದ್ದ ಟ್ರೋಫಿಗಳನ್ನೇ ಮಾರಲು ಮುಂದಾಗಿದ್ದಾರೆ.


15 ವರ್ಷದ ಯುವ ಗಾಲ್ಫರ್ ತಾವು ಇದುವರೆಗೆ ಗೆದ್ದ ಟ್ರೋಫಿಗಳನ್ನು ಮಾರಿ 4.5 ಲಕ್ಷ ರೂ. ಸಂಗ್ರಹಿಸಿದ್ದಾರೆ. ಈ ಹಣವನ್ನು ಅವರು ಕೊರೋನಾ ಪರಿಹಾರ ನಿಧಿಗೆ ನೀಡಲಿದ್ದಾರೆ.

ಈ ಟ್ರೋಫಿಗಳ ಪೈಕಿ ಮೂರು ವಿಶ್ವ ಚಾಂಪಿಯನ್ ಶಿಪ್ ಮತ್ತು ರಾಷ್ಟ್ರೀಯ ಚಾಂಪಿಯನ್ ಶಿಪ್ ಮೆಡಲ್ ಗಳೂ ಸೇರಿವೆ. ತಾವು ಗೆದ್ದ ಟ್ರೋಫಿಗಳನ್ನು ನೆನಪಿಗಾಗಿ ಇಟ್ಟುಕೊಳ್ಳದೇ ಅವುಗಳನ್ನು ಮಾರಿ ಅದನ್ನು ಉತ್ತಮ ಕಾರ್ಯಕ್ಕೆ ನೆರವಾಗಲು ಬಳಸಿದ್ದು, ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೊರೋನಾಗೆ ಪರಿಹಾರ ದೇಣಿಗೆ ನೀಡಿದ ಕ್ರಿಕೆಟಿಗ ಚೇತೇಶ್ವರ ಪೂಜಾರ