Select Your Language

Notifications

webdunia
webdunia
webdunia
webdunia

ವಕೀಲನನ್ನು ಕೊಲ್ಲಲು ಕೋರ್ಟ್‌ಗೆ ಬಾಂಬ್ ಇಟ್ಟ ಆ ವ್ಯಕ್ತಿ ಯಾರು?

ವಕೀಲನನ್ನು ಕೊಲ್ಲಲು ಕೋರ್ಟ್‌ಗೆ ಬಾಂಬ್ ಇಟ್ಟ ಆ ವ್ಯಕ್ತಿ ಯಾರು?
ನವದೆಹಲಿ , ಭಾನುವಾರ, 19 ಡಿಸೆಂಬರ್ 2021 (09:05 IST)
ನವದೆಹಲಿ : ಪಕ್ಕದ ಮನೆಯ ವಕೀಲನನ್ನು ಕೊಲ್ಲುವುದಕ್ಕಾಗಿ ದೆಹಲಿ ನ್ಯಾಯಾಲಯದಲ್ಲಿ ಸ್ಫೋಟಕವನ್ನು ಇರಿಸಿದ್ದ ಆರೋಪದಲ್ಲಿ ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್ಡಿಒ) ವಿಜ್ಞಾನಿಯನ್ನು ಪೊಲೀಸರು ಬಂಧಿಸಿದ್ದಾರೆ.

ಭರತ್ ಭೂಷಣ್ ಕಟಾರಿಯಾ ಬಂಧಿತ ವಿಜ್ಞಾನಿ. ಈತ ಬಾಂಬ್ ತಯಾರಿಕೆಗೆ ಬಳಸುತ್ತಿದ್ದ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಡಿ.9 ರಂದು ರೋಹಿಣಿ ಕೋರ್ಟ್ ಕಾಂಪ್ಲೆಕ್ಸ್ನ ಕೊಠಡಿಯೊಂದರಲ್ಲಿ ಸಂಭವಿಸಿದ್ದ ಸ್ಫೋಟದಲ್ಲಿ ಓರ್ವ ವ್ಯಕ್ತಿ ಗಾಯಗೊಂಡಿದ್ದರು.

ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಪೆಷಲ್ ಸೆಲ್ ಟೀಮ್ ತನಿಖೆ ನಡೆಸಿತ್ತು. ತನಿಖೆ ವೇಳೆ 1 ಸಾವಿರ ವಾಹನಗಳು ಹಾಗೂ ಕೋರ್ಟ್ ಒಳಗೆ ಮತ್ತು ಹೊರಗೆ ಅಳವಡಿಸಿರುವ ಸುಮಾರು 100ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳನ್ನು ಫೂಟೇಜ್ ಅನ್ನು ಪರಿಶೀಲಿಸಲಾಗಿತ್ತು ಎಂದು ದೆಹಲಿ ಪೊಲೀಸ್ ಕಮಿಷನರ್ ತಿಳಿಸಿದ್ದಾರೆ.

ಘಟನೆ ಸಂಭವಿಸಿದ ದಿನ ಕೋರ್ಟ್ ಬಳಿ ಅನುಮಾನಾಸ್ಪದವಾಗಿ ಓಡಾಡಿದವರ ಬಗ್ಗೆಯೂ ಪೊಲೀಸರು ತನಿಖೆ ನಡೆಸಿದ್ದರು. ಆ ದಿನ ಎರಡು ಚೀಲಗಳೊಂದಿಗೆ ಕೋರ್ಟ್ ಪ್ರವೇಶಿಸಿದ್ದ ವಿಜ್ಞಾನಿ, ನಂತರ ಒಂದು ಚೀಲ ಹಿಡಿದು ಹೊರಬಂದಿದ್ದಾರೆ.

ಕೃತ್ಯಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದಾಗ, ವಿಜ್ಞಾನಿ ಮತ್ತು ವಕೀಲ ಪರಸ್ಪರರು ದ್ವೇಷಿಸುತ್ತಿದ್ದರು ಎಂಬುದು ಗೊತ್ತಾಗಿದೆ. ಇಬ್ಬರೂ ನೆರೆಹೊರೆಯವರಾಗಿದ್ದು, ಒಂದೇ ಕಟ್ಟಡದಲ್ಲಿ ವಾಸವಾಗಿದ್ದಾರೆ. ವಕೀಲ ನೆಲಮಹಡಿಯಲ್ಲಿ ಹಾಗೂ ವಿಜ್ಞಾನಿ ಅದೇ ಕಟ್ಟಡದ 3ನೇ ಮಹಡಿಯಲ್ಲಿ ವಾಸಿಸುತ್ತಿದ್ದಾರೆ. ಅಲ್ಲದೇ ವಕೀಲನ ವಿರುದ್ಧ ವಿಜ್ಞಾನಿ 5 ಪ್ರಕರಣ ಹಾಗೂ ವಿಜ್ಞಾನಿ ವಿರುದ್ಧ ವಕೀಲ 7 ಪ್ರಕರಣ ದಾಖಲಿಸಿದ್ದಾರೆ. 


Share this Story:

Follow Webdunia kannada

ಮುಂದಿನ ಸುದ್ದಿ

ಸಂಗೀತದ ನೆಪ : ಆತ ಮಾಡುತ್ತಿದ್ದ ಕೆಲಸ ನೋಡುದ್ರೆ ಶಾಕ್ ಆಗ್ತೀರ!