ಎಡ್ವಿನಾ ಮೌಂಟ್ ಬೇಟನ್ ಗೆ ನೆಹರೂ ಬರೆದ ಪತ್ರದಲ್ಲಿ ಏನಿದೆ: ಕೇಂದ್ರ ಯಾಕೆ ಪತ್ರ ಕೇಳುತ್ತಿದೆ

Krishnaveni K
ಮಂಗಳವಾರ, 17 ಡಿಸೆಂಬರ್ 2024 (09:36 IST)
ನವದೆಹಲಿ: ಭಾರತದ ಪ್ರಥಮ ಪ್ರಧಾನಿ ಜವಹರ್ ಲಾಲ್ ನೆಹರೂ ಬ್ರಿಟಿಷ್ ಕೊನೆಯ ವೈಸರೀನ್ ಎಡ್ವಿನಾ ಮೌಂಟ್ ಬೇಟನ್ ಗೆ ಬರೆದ ಪತ್ರವನ್ನು ಹಿಂದಿರುಗಿಸುವಂತೆ ಈಗ ಕೇಂದ್ರ ಸರ್ಕಾರ ರಾಹುಲ್ ಗಾಂಧಿಗೆ ಕೇಳುತ್ತಿದೆ. ಅಷ್ಟಕ್ಕೂ ಈ ಪತ್ರದಲ್ಲಿ ಅಂತಹದ್ದೇನಿತ್ತು ಎಂಬ ಕುತೂಹಲ ಎಲ್ಲರಿಗಿದೆ.

2008 ರಲ್ಲಿ ಯುಪಿಎ ಅಧಿಕಾರಾವಧಿಯಲ್ಲಿ ನೆಹರೂ ಅನೇಕರಿಗೆ ಬರೆದ ಪತ್ರಗಳ ಸುಮಾರು 51 ಪತ್ರಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದರಂತೆ. ಅದನ್ನು ಅವರು ಮರಳಿ ನೀಡಿಲ್ಲ. ಈ ಪತ್ರಗಳ ಪೈಕಿ ನೆಹರೂ ವೈಸರೀನ್ ಎಡ್ವಿನಾಗೆ ಬರೆದ ಪತ್ರವೂ ಇದೆ ಎನ್ನಲಾಗಿದೆ. ಆ ಪತ್ರವನ್ನು ಒರಿಜಿನಲ್ ಅಥವಾ ಇನ್ನೊಂದು ಪ್ರತಿಯನ್ನಾದರೂ ನೀಡಿ. ಅದನ್ನು ನಾವು ಪ್ರಧಾನ ಮಂತ್ರಿ ವಸ್ತು ಸಂಗ್ರಹಾಲಯದಲ್ಲಿ ಇರಿಸುತ್ತೇವೆ ಎಂದು ಕೇಂದ್ರ ಕೇಳಿದೆ.

ಆದರೆ ಈ ಪತ್ರವನ್ನು ಮರಳಿಸಲು ಸೋನಿಯಾ ಗಾಂಧಿಯವರು ಹಿಂದೇಟು ಹಾಕುವುದು ಯಾಕೆ ಎಂಬುದು ಬಿಜೆಪಿ ಪ್ರಶ್ನೆ. ಹೀಗಾಗಿ ಈ ವಿಚಾರಕ್ಕೀಗ ರಾಜಕೀಯ ಬಣ್ಣ ಪಡೆದುಕೊಂಡಿದೆ. ನೆಹರೂ ಮತ್ತು ಎಡ್ವಿನಾ ನಡುವೆ ಅಪರಿಮಿತ ಸ್ನೇಹವಿತ್ತು ಎಂಬುದು ಎಡ್ವಿನಾ ಮಗಳು ಪಮೇಲಾ ಬರೆದ ಪತ್ರದಲ್ಲಿ ಉಲ್ಲೇಖವಾಗಿತ್ತು.

ಹೀಗಾಗಿ ಈ ಪತ್ರದಲ್ಲೂ ಇವರಿಬ್ಬರ ನಡುವಿನ ಸ್ನೇಹ ಸಂಬಂಧದ ಆಳದ ಕುರಿತು ಮಾಹಿತಿಯಿರಬಹುದು ಎನ್ನಲಾಗಿದೆ. ಹೀಗಾಗಿ ಈ ಪತ್ರದ ನಕಲು ಪ್ರತಿ ಅಥವಾ ಡಿಜಿಟಲ್ ಪ್ರತಿಯನ್ನಾದರೂ ನೀಡಿ ಎಂದು ಬಿಜೆಪಿ ಆಗ್ರಹಿಸಿದೆ. ಪತ್ರದಲ್ಲಿ ಅನೇಕ ರಹಸ್ಯಗಳಿರಬಹುದು ಎಂಬುದು ಬಿಜೆಪಿ ಗುಮಾನಿಯಾಗಿದೆ. ಇದೇ ಕಾರಣಕ್ಕೆ ಸೋನಿಯಾ, ರಾಹುಲ್ ಈ ಪತ್ರವನ್ನು ಹಿಂತಿರುಗಿಸುತ್ತಿಲ್ಲ ಎಂಬುದು ಬಿಜೆಪಿ ಆರೋಪವಾಗಿದೆ. ಆದರೆ ಈ ವಿಚಾರದ ಬಗ್ಗೆ ಗಾಂಧಿ ಕುಟುಂಬ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಅಗ್ರಹಾರದಲ್ಲಿ ಅಕ್ರಮ ಹೆಚ್ಚು ಬೆನ್ನಲ್ಲೇ, ಖಡಕ್ ಪೊಲೀಸ್ ಅಧಿಕಾರಿ ಎಂಟ್ರಿ, ಕೈದಿಗಳಿಗೆ ನಡುಕ

ಷಡ್ಯಂತ್ರ ಬಯಲು ಬೆನ್ನಲ್ಲೇ ಮಹತ್ವದ ಪ್ರಕಟಣೆ ಹೊರಡಿಸಿದ ಧರ್ಮಸ್ಥಳ

ರೇಷ್ಮೆ ಬದಲು ಪಾಲಿಸ್ಟರ್ ಶಾಲು ತಿರುಪತಿ ದೇವಸ್ಥಾನದಲ್ಲಿ ಏನಿದು ಹಗರಣ

ಐಪಿಎಲ್ ಪಂದ್ಯವನ್ನು ಬೆಂಗಳೂರಿನಿಂದ ಹೊರಗೆ ಹೋಗಲು ಬಿಡುವುದಿಲ್ಲ: ಶಿವಕುಮಾರ್‌

ದ್ವೇಷ ಭಾಷಣ ಕಾರುವವರಿಗೆ ಮುಂದೈತೆ ಮಾರಿಹಬ್ಬ: ವಿಧಾನಸಭೆಯಲ್ಲಿ ಮಂಡನೆಯಾಯ್ತು ಪ್ರತಿಬಂಧಕ ಮಸೂದೆ

ಮುಂದಿನ ಸುದ್ದಿ
Show comments