Select Your Language

Notifications

webdunia
webdunia
webdunia
webdunia

ಬೆಂಚಿನ ಮೇಲಿದ್ದ ಕಾಲು ಕೆಳಗೆ ಇಡಲು ನಿರಾಕರಿಸಿದ್ದಕ್ಕೆ ಹೀಗಾ ಮಾಡೋದು?

ಬೆಂಚಿನ ಮೇಲಿದ್ದ ಕಾಲು ಕೆಳಗೆ ಇಡಲು ನಿರಾಕರಿಸಿದ್ದಕ್ಕೆ ಹೀಗಾ ಮಾಡೋದು?
ನವದೆಹಲಿ , ಸೋಮವಾರ, 30 ನವೆಂಬರ್ 2020 (10:38 IST)
ನವದೆಹಲಿ : ಕ್ಷುಲಕ ಕಾರಣಕ್ಕೆ ಮೂವರು ಅಪರಿಚಿತ ವ್ಯಕ್ತಿಗಳು 23 ವರ್ಷದ ಯುವಕನಿಗೆ ಗುಂಡು ಹಾರಿಸಿದ ಘಟನೆ ಪಶ್ಚಿಮ ದೆಹಲಿಯ ಜನಕಪುರಿ ಪ್ರದೇಶದಲ್ಲಿ ನಡೆದಿದೆ.

ರಾಜ ಆಲಂ ದಾಳಿಗೊಳಗಾದ ವ್ಯಕ್ತಿ. ಈತ ದೇವಾಲಯವೊಂದರ ಬಳಿಯ ಉದ್ಯಾನವನವೊಂದರಲ್ಲಿ ಬೆಂಚಿನ ಮೇಲೆ ಕುಳಿತಿದ್ದಾಗ  ವ್ಯಕ್ತಿಯೊಬ್ಬ ಬಂದು ತನ್ನ ಪಾದವನ್ನು ಕೆಳಗೆ ಇಡುವಂತೆ ಕೇಳಿಕೊಂಡಿದ್ದಾನೆ. ಅದಕ್ಕೆ ಆತ ನಿರಾಕರಿಸಿದಾಗ ಅವರು ನಿಂದನೆ ಮಾಡಿ ಹೊರಬಂದಿದ್ದಾರೆ.

ಸ್ವಲ್ಪ ಹೊತ್ತಿನ ಬಳಿಕ ಆ ವ್ಯಕ್ತಿ, ಇಬ್ಬರು ಪುರುಷರನ್ನು ಕರೆದುಕೊಂಡು ಅಲ್ಲಿಗೆ ಬಂದು ಆಲಂನೊಂದಿಗೆ ಜಗಳವಾಡಿ ಆತನಿಗೆ ಗುಂಡು ಹಾರಿಸಿದ್ದಾರೆ. ಗಾಯಗೊಂಡ ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮದುವೆಯಾಗುವುದಾಗಿ ಭರವಸೆ ನೀಡಿ ಹುಡುಗಿಯನ್ನು ಮನೆಗೆ ಕರೆದೊಯ್ದು ಆತ ಮಾಡಿದ್ದೇನು ಗೊತ್ತಾ?