Select Your Language

Notifications

webdunia
webdunia
webdunia
webdunia

ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಬಂಧ ಬೆಳೆಸಿದ ವಕೀಲ ಕೊನೆಗೆ ಮಾಡಿದ್ದೇನು?

ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಬಂಧ ಬೆಳೆಸಿದ ವಕೀಲ ಕೊನೆಗೆ ಮಾಡಿದ್ದೇನು?
ಕಾನ್ಪುರ , ಗುರುವಾರ, 29 ಅಕ್ಟೋಬರ್ 2020 (08:26 IST)
ಕಾನ್ಪುರ : ಮದುವೆಯಾಗುವ ನೆಪದಲ್ಲಿ ವಕೀಲನೊಬ್ಬ ಮಹಿಳೆಯ ಶೀಲಕೆಡಿಸಿದ ಹಿನ್ನಲೆಯಲ್ಲಿ ಸಂತ್ರಸ್ತ ಮಹಿಳೆ ಮರ ಹತ್ತಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ ಘಟನೆ ಉತ್ತರ ಪ್ರದೇಶದ ಜಿಲ್ಲೆಯೊಂದರಲ್ಲಿ ನಡೆದಿದೆ.

ಮಹಿಳೆ ತನ್ನ ಪತಿ ಹಾಗೂ ಅಳಿಯಂದಿರ ವಿರುದ್ಧ ದಾಖಲಿಸಿದ್ದ ಕೌಟುಂಬಿಕ ಹಿಂಸಾಚಾರದ ಪ್ರಕರಣವನ್ನು ಆರೋಪಿ ವಕೀಲ ನಿರ್ವಹಿಸುತ್ತಿದ್ದನು. ಆ ವೇಳೆ ಆತ ಮಹಿಳೆಗೆ  ತನ್ನನ್ನು ಮದುವೆಯಾಗುವುದಾಗಿ ಭರವಸೆ ನೀಡಿ ದೈಹಿಕ ಸಂಬಂಧ ಬೆಳೆಸಿದ್ದಾನೆ. ಬಳಿಕ ಮದುವೆಯಾಗಲು ನಿರಾಕರಿಸಿದ್ದಾನೆ. ಇದರಿಂದ ಅಸಮಾಧಾನಗೊಡ ಮಹಿಳೆ ಮರ ಹತ್ತಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾಳೆ. ಸ್ಥಳೀಯರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಬಂದ ಪೊಲೀಸರು ಮಹಿಳೆಯನ್ನು ಮರದಿಂದ ಕೆಳಗಿಳಿಸಿ ಆಕೆಯಿಂದ ದೂರು ದಾಖಲಿಸಿಕೊಂಡು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾತ್ರಿ ಮನೆಯಲ್ಲಿದ್ದ ಸೋದರ ಸಂಬಂಧಿ ಯುವಕ ಹೀಗಾ ಮಾಡೋದು