Publish Date: Sun, 05 May 2019 (11:54 IST)
Updated Date: Sun, 05 May 2019 (11:59 IST)
ಅಸ್ಸಾಂ : ನಮಗೆ ಹಾಲು ಕೊಡದ ಮುಸ್ಲೀಂರಂತ ಹಸುಗಳಿಗೆ ನಾವು ಮೇವು ಹಾಕುವುದಿಲ್ಲ ಎಂದು ಅಸ್ಸಾಂನ ದಿಬ್ರುಘರ್ ಕ್ಷೇತ್ರದ ಶಾಸಕ ಪ್ರಶಾಂತ್ ಪೂಕಾನ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಸ್ಥಳೀಯ ಮಾಧ್ಯಮವೊಂದರಲ್ಲಿ ಸಂದರ್ಶನದ ವೇಳೆ ಮಾತನಾಡಿದ ಅವರು, ನಮ್ಮ ದೇಶದಲ್ಲಿ ಶೇ.90ರಷ್ಟು ಹಿಂದೂಗಳು ನಮ್ಮ ಬಿಜೆಪಿಗೆ ವೋಟ್ ಹಾಕುತ್ತಾರೆ. ಆದರೇ ಅದೇ ಶೇ.90ರಷ್ಟು ಮುಸ್ಲೀಂ ಜನರು ನಮ್ಮ ಬಿಜೆಪಿ ಪಕ್ಷಕ್ಕೆ ಮತ ಚಲಾಯಿಸುವುದಿಲ್ಲ. ಅದೇ ಕಾಂಗ್ರೆಸ್ ಗೆ ವೋಟ್ ಹಾಕುತ್ತಾರೆ. ಹೀಗಾಗಿ ಒಂದು ಹಸು ನಮಗೆ ಹಾಲು ನೀಡದೇ ಇದ್ದರೇ, ಅದಕ್ಕೆ ನಾವು ಮೇವು ಹಾಕ್ತೀವಾ.? ಹಾಗೆಯೇ ನಾವು ನಮಗೆ ಹಾಲು ಕೊಡದ ಮುಸ್ಲೀಂರಂತ ಹಸುಗಳಿಗೆ ಏಕೆ ಮೇವು ಹಾಕಬೇಕು ಎಂದು ಹೇಳಿಕೆ ನೀಡಿದ್ದಾರೆ.
ಈ ಹೇಳಿಕೆಯ ಬಗ್ಗೆ ಬಾರೀ ವಿರೋಧ ವ್ಯಕ್ತವಾಗಿದ್ದು, ಇದು ಖಂಡಿಸಿ ಹಾಗೂ ಮುಸ್ಲೀಂರನ್ನು ಹಸುವಿಗೆ ಹೋಲಿಸಿದ ಪ್ರಶಾಂತ್ ಪೂಕಾನ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕಾಂಗ್ರೆಸ್ ನ ದೇಬಬ್ರತಾ ಸೈಕಿಯವರು ಅಸ್ಸಾಂನ ಸ್ಪೀಕರ್ ಗೆ ಪತ್ರ ಬರೆದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.