Select Your Language

Notifications

webdunia
webdunia
webdunia
webdunia

ಶುಕ್ರವಾರ ಹಾಲಿನಿಂದ ಹೀಗೆ ಮಾಡಿದರೆ ಎಂದೂ ಕಾಡಲ್ಲ ಹಣದ ಸಮಸ್ಯೆ

ಶುಕ್ರವಾರ ಹಾಲಿನಿಂದ ಹೀಗೆ ಮಾಡಿದರೆ ಎಂದೂ ಕಾಡಲ್ಲ ಹಣದ ಸಮಸ್ಯೆ
ಬೆಂಗಳೂರು , ಶುಕ್ರವಾರ, 29 ಮಾರ್ಚ್ 2019 (09:42 IST)
ಬೆಂಗಳೂರು : ಮನುಷ್ಯರಿಗೆ ಹೆಚ್ಚಾಗಿ ಎದುರಾಗುವ ಸಮಸ್ಯೆಯೆಂದರೆ ಅದು ಹಣದ ಸಮಸ್ಯೆ. ಜೀವನ ನಡೆಸಲು ಬಹಳ ಮುಖ್ಯವಾಗಿ ಬೇಕಾಗಿರುವುದು  ಹಣ. ಹಣವಿಲ್ಲದವರು ಜೀವನದಲ್ಲಿ ನಾನಾತರಹದ ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಅದಕ್ಕಾಗಿ ಶುಕ್ರವಾರದಂದು ಈ ಪರಿಹಾರವನ್ನು ಮಾಡಿದರೆ ಹಣದ ಸಮಸ್ಯೆ ಎಂದೂ ಎದುರಾಗಲ್ಲ.


ತುಳಸಿಗಿಡವಿದ್ದಲ್ಲಿ ನಕರಾತ್ಮಕಶಕ್ತಿ ಇರುವುದಿಲ್ಲ. ತುಳಸಿಗಿಡವನ್ನು ಮುಂಜಾನೆ ಹಾಗೂ ಸಂಜೆಯ ವೇಳೆ ಭಕ್ತಿಯಿಂದ ಯಾರು ಪೂಜಿಸುತ್ತಾರೋ ಅವರ ಮನೆಯಲ್ಲಿ ಹಣದ ಸಮಸ್ಯೆ ಇರುವುದಿಲ್ಲ ಎಂದು ಪಂಡಿತರು ಹೇಳುತ್ತಾರೆ.

 
ಆದ್ದರಿಂದ ದಶಮಿ ತಿಥಿ ಮತ್ತು ಶುಕ್ರವಾರ ಒಂದೇ ದಿನ ಬಂದ ದಿವಸ ಸ್ತ್ರೀಯರು ಪ್ರಾತಃಕಾಲದಲ್ಲಿ ಎದ್ದು ಸ್ನಾನ ಮಾಡಿ ತುಳಸಿ ಗಿಡದ ಸುತ್ತ ಶುದ್ಧ ಮಾಡಿ ಅರಶಿನ, ಕುಂಕುಮ, ರಂಗೋಲಿ ಹಾಗೂ ಹೂವುಗಳಿಂದ ಅಲಂಕರಿಸಿ  ಪೂಜೆ ಮಾಡಿ ನಂತರ ಹಸುವಿನ ಹಾಲನ್ನು ತೆಗೆದುಕೊಂಡು ತುಳಸಿಗಿಡಕ್ಕೆ ಅಭಿಷೇಕ ಮಾಡಬೇಕು. ನಂತರ ತುಳಸಿಗಿಡದ ಬುಡದಲ್ಲಿರುವ ಮಣ್ಣನ್ನು ತೆಗೆದುಕೊಂಡು ಹಣೆಗೆ ತಿಲಕವಿಟ್ಟುಕೊಳ್ಳಬೇಕು. ಇದರಿಂದ ಹಣಕಾಸಿನ ತೊಂದರೆ ದೂರವಾಗಿ ಐಶ್ವರ್ಯವಂತರಾಗುತ್ತೀರಿ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.


 

Share this Story:

Follow Webdunia kannada

ಮುಂದಿನ ಸುದ್ದಿ

ರೇವತಿ ನಕ್ಷತ್ರದವರು ಯಾವ ದೇವರನ್ನು ಪೂಜೆ ಮಾಡಿದರೆ ಏನು ಫಲ?