Webdunia - Bharat's app for daily news and videos

Install App

Viral video: ಮಾಂಗಲ್ಯ ಸರ ತೆಗೆಯಲು ಬಂದ ವೃದ್ಧ ದಂಪತಿ: ನೆಟ್ಟಿಗರ ಮನಗೆದ್ದ ಅಂಗಡಿ ಮಾಲಿಕ

Krishnaveni K
ಗುರುವಾರ, 19 ಜೂನ್ 2025 (10:03 IST)
ಮಹಾರಾಷ್ಟ್ರ: ಮಾಂಗಲ್ಯ ಸರ ತೆಗೆಯಲು ವೃದ್ಧ ದಂಪತಿ ಚಿಲ್ಲರೆ ಕಾಸು ಹಿಡಿದುಕೊಂಡು ಚಿನ್ನದ ಅಂಗಡಿಗೆ ಬಂದಿದ್ದರು. ಅವರಿಗೆ ಚಿನ್ನದ ಅಂಗಡಿ ಮಾಲಿಕ ನೀಡಿದ ಉಡುಗೊರೆಗೆ ನೆಟ್ಟಿಗರು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಂತಹದ್ದೊಂದು ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
 

ಮಹಾರಾಷ್ಟ್ರದ ಸಂಬಾಜಿನಗರದ ಗೋಪಿಕಾ ಜ್ಯುವೆಲ್ಲರ್ಸ್ ಎಂಬ ಚಿನ್ನದ ಅಂಗಡಿಯೊಂದರಲ್ಲಿ ಘಟನೆ ನಡೆದಿದೆ. 93 ವರ್ಷದ ತಾತ ತನ್ನ ಪತ್ನಿಯೊಂದಿಗೆ ತಾಳಿ ಸರ ಖರೀದಿಸಲು ಚಿಲ್ಲರೆ ಕಾಸಿನೊಂದಿಗೆ ಬರುತ್ತಾರೆ. ಅವರ ಬಳಿ ಎಲ್ಲಾ ಸೇರಿದರೆ ಇದ್ದಿದ್ದು ಕೇವಲ 1120 ರೂ. ಈಗಿನ ಕಾಲದಲ್ಲಿ ಚಿನ್ನದ ಬೆಲೆ ಎಲ್ಲಿಗೆ ಬಂದು ತಲುಪಿದೆ ಎಂದು ಎಲ್ಲರಿಗೂ ಗೊತ್ತಿದೆ.

ಆದರೆ ಪ್ರಪಂಚ ಜ್ಞಾನವೇ ಇಲ್ಲದ ದಂಪತಿಯ ಮುಗ್ಧ ಮಾತುಗಳು ಅಂಗಡಿ ಮಾಲಿಕನ ಹೃದಯ ಗೆದ್ದಿದೆ. ಅವರ ಬಳಿ ಬಂದು  ವಿಚಾರಿಸಿಕೊಂಡ ಅಂಗಡಿ ಮಾಲಿಕ ನಿಮ್ಮ ಬಳಿ ಎಷ್ಟು ಹಣವಿದೆ ಎಂದು ಕೇಳುತ್ತಾರೆ. ವೃದ್ಧ ತನ್ನ ಚೀಲದಲ್ಲಿದ್ದ ಚಿಲ್ಲರೆ ಹಣವೆಲ್ಲಾ ಟೇಬಲ್ ಮೇಲೆ ಹರಡಿದ್ದಾರೆ. ಅಂಗಡಿ ಮಾಲಿಕ ಅದನ್ನೆಲ್ಲಾ ಒಂದೊಂದಾಗಿ ಎಣಿಸಿ ಬಳಿಕ ಈ ಹಣ ನಿಮ್ಮಲ್ಲೇ ಇರಲಿ ಎಂದು ವಾಪಸ್ ಮಾಡುತ್ತಾನೆ. ಮುಗ್ಧ ವೃದ್ಧ ದಂಪತಿ ಅವಾಕ್ಕಾಗಿ ನೋಡುವಾಗ ಹಣದ ಬದಲು ಇದು ನಿಮಗೆ ಎಂದು ಮಾಂಗಲ್ಯ ಸರವೊಂದನ್ನು ಉಚಿತವಾಗಿ ಉಡುಗೊರೆಯಾಗಿ ನೀಡಿದ್ದಾರೆ.

ಆದರೆ ವೃದ್ಧ ದಂಪತಿ ಉಚಿತವಾಗಿ ತೆಗೆದುಕೊಳ್ಳಲು ಹಿಂದೆ-ಮುಂದೆ ನೋಡಿದ್ದಾರೆ. ಅದಕ್ಕೆ ಅಂಗಡಿ ಮಾಲಿಕ ವೃದ್ಧರಿಂದ 20 ರೂ. ನೋಟು ತೆಗೆದುಕೊಂಡು ಇದು ಪಾಂಡುರಂಗನ ಆಶೀರ್ವಾದ ಎಂದುಕೊಳ್ಳುತ್ತೇನೆ ಎಂದಿದ್ದಾರೆ. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

 
 
 
 
 
 
 
 
 
 
 
 
 
 
 

A post shared by Archi Achhu (@bagalkot_hudugi_archi)

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕೆಲಸದ ಅವಧಿ ಹೆಚ್ಚಳ: 10 ಗಂಟೆ ಕೆಲಸ ಮಾಡಿ ಅಂದ್ರೆ ಫ್ಯಾಮಿಲಿ ಏನು ಮಾಡ್ಬೇಕು

ಏರ್‌ ಇಂಡಿಯಾ ವಿಮಾನ ದುರಂತದ ಬಳಿಕ 80 ವಿಮಾನ ಹಾರಾಟಗಳ ರದ್ದು

ಕರುಣೆಯಿಲ್ಲದೆ ಯುದ್ಧ ಮುಂದುವರೆಯುತ್ತದೆ: ಟ್ರಂಪ್‌ ವಾರ್ನಿಂಗ್‌ಗೆ ಇರಾನ್‌ ಡೊಂಟ್ ಕ್ಯಾರೇ

ಲ್ಯಾಂಡ್ ಆದ ಬಳಿಕ ತಾಂತ್ರಿಕ ದೋಷದಿಂದ 40ನಿಮಿಷ ವಿಮಾನದೊಳಗೆ ಸಿಲುಕಿಕೊಂಡ ಇಂಡಿಗೋ ಪ್ರಯಾಣಿಕರು

Ahmedabad Plane Crash: 190 ಶವಗಳ ಗುರುತು ಪತ್ತೆ, 159 ಮಂದಿ ಮೃತದೇಹ ಕುಟುಂಬಕ್ಕೆ ಹಸ್ತಾಂತರ

ಮುಂದಿನ ಸುದ್ದಿ
Show comments