Select Your Language

Notifications

webdunia
webdunia
webdunia
webdunia

ಕೊವಿಡ್ 19 ಸೋಂಕಿಗೆ ಇಬ್ಬರು ಬಿಜೆಪಿ ಶಾಸಕರು ನಿಧನ

ಕೊವಿಡ್ 19 ಸೋಂಕಿಗೆ ಇಬ್ಬರು ಬಿಜೆಪಿ ಶಾಸಕರು ನಿಧನ
ಉತ್ತರ ಪ್ರದೇಶ , ಶನಿವಾರ, 24 ಏಪ್ರಿಲ್ 2021 (10:45 IST)
ಉತ್ತರ ಪ್ರದೇಶ : ಕೊವಿಡ್ 19 ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದ ಇಬ್ಬರು ಬಿಜೆಪಿ ಶಾಸಕರು ಉತ್ತರಪ್ರದೇಶದಲ್ಲಿ ಶುಕ್ರವಾರದಂದು ನಿಧನರಾಗಿದ್ದಾರೆ.   

ಔರಯ ಬಿಜೆಪಿ ಶಾಸಕ ರಮೇಶ್ ದಿವಾಕರ್ ಮತ್ತು ಲಕ್ನೋ ಶಾಸಕ ಸುರೇಶ್ ಶ್ರೀವಾಸ್ತವ್ ಅವರು ನಿಧನರಾಗಿದ್ದಾರೆ. ಶಾಸಕ ದಿವಾಕರ್ ಗೆ 57 ವರ್ಷ ವಯಸ್ಸಾಗಿದ್ದು, ಮೀರತ್ ನಲ್ಲಿ ಕೊರೊನಾಗೆ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಶುಕ್ರವಾರ ಸಂಜೆ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಈ ಬಗ್ಗೆ ಸಿಎಂ ಯೋಗಿ ಆದಿತ್ಯನಾಥ್ ಮಾಹಿತಿ ನೀಡಿ ಸಂತಾಪ ಸೂಚಿಸಿದ್ದಾರೆ.

ಹಾಗೇ ಲಕ್ನೋ ಶಾಸಕ ಸುರೇಶ್ ಶ್ರೀವಾಸ್ತವ್ ಅವರು  ಸಂಜಯ್ ಗಾಂಧಿ ಸ್ನಾತಕೋತ್ತರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಕಳೆದ ಒಂದು ವಾರದಿಂದ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ  ಶುಕ್ರವಾರ ಸಂಜೆ  ನಿಧನರಾಗಿದ್ದಾರೆ. ಈ ಬಗ್ಗೆ ಬಿಜೆಪಿ ವಕ್ತಾರ ರಾಕೇಶ್ ತ್ರಿಪಾಠಿ ಮಾಹಿತಿ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೊರೋನಾಪೀಡಿತ ಭಾರತಕ್ಕೆ ನೆರವು ನೀಡಲು ಮುಂದೆ ಬಂದ ಪಾಕ್