Select Your Language

Notifications

webdunia
webdunia
webdunia
webdunia

ಕರೂರು ದುರಂತದ ಬಳಿಕ ವಿಜಯ್ ಸಾರ್ವಜನಿಕ ರ್ಯಾಲಿಗೆ ಟಿವಿಕೆ ಮನವಿ

TVK Vijay Next Rally

Sampriya

ಚೆನ್ನೈ , ಗುರುವಾರ, 20 ನವೆಂಬರ್ 2025 (17:53 IST)
Photo Credit X
ಚೆನ್ನೈ: 41 ಜನರ ಸಾವಿಗೆ ಕಾರಣವಾದ ಕರೂರ್ ಕಾಲ್ತುಳಿತ ದುರಂತದ ನಂತರ ಸ್ಥಗಿತಗೊಂಡಿದ್ದ ಪಕ್ಷದ ಮುಖ್ಯಸ್ಥ ಮತ್ತು ನಟ ವಿಜಯ್ ಅವರ ರಾಜ್ಯಾದ್ಯಂತ ಪ್ರವಾಸವನ್ನು ಪುನರಾರಂಭಿಸುವ ಪ್ರಯತ್ನದಲ್ಲಿ ತಮಿಳುನಾಡಿನ ಸೇಲಂ ಜಿಲ್ಲೆಯಲ್ಲಿ ಡಿಸೆಂಬರ್ 4 ರಂದು ಸಾರ್ವಜನಿಕ ರ್ಯಾಲಿ ನಡೆಸಲು ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪೊಲೀಸರ ಅನುಮತಿ ಕೇಳಿದೆ. 

ಮಂಗಳವಾರ, ಪಕ್ಷದ ಸೇಲಂ ಜಿಲ್ಲಾ ಕಾರ್ಯದರ್ಶಿ ಸೇಲಂ ಪೊಲೀಸ್ ಕಮಿಷನರ್‌ಗೆ ಮನವಿ ಸಲ್ಲಿಸಿ, ಮೂರು ಸಂಭಾವ್ಯ ಸ್ಥಳಗಳನ್ನು ಪ್ರಸ್ತಾಪಿಸಿದರು. ಬೋಸ್ ಮೈದಾನ, ಫೋರ್ಟ್ ಮೈದಾನ ಮತ್ತು ಸೀಲನಾಯಕನ್‌ಪಟ್ಟಿ ಪ್ರದೇಶದಲ್ಲಿ ಖಾಸಗಿ ಜಾಗ. 

ಕರೂರ್ ಜಿಲ್ಲೆಯ ವೇಲುಸಾಮಿಪುರಂನಲ್ಲಿ ಟಿವಿಕೆಯ ರಾಜಕೀಯ ರ್ಯಾಲಿಗಾಗಿ ಭಾರೀ ಜನಸ್ತೋಮ ನೆರೆದ ನಂತರ ನಡೆದ ಕರೂರ್ ದುರಂತವು ರಾಜ್ಯದ ರಾಜಕೀಯ ರ್ಯಾಲಿಗಳ ತೀವ್ರ ಪರಿಶೀಲನೆಗೆ ಕಾರಣವಾಗಿತ್ತು.

ಇಂತಹ ದುರಂತಗಳನ್ನು ತಡೆಯಲು ರಾಜಕೀಯ ಪಕ್ಷಗಳೊಂದಿಗೆ ಸಮಾಲೋಚಿಸಿ ರೂಪಿಸಿರುವ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್(ಎಸ್‌ಒಪಿ)ಯನ್ನು ತಮಿಳುನಾಡು ಸರ್ಕಾರ ಶುಕ್ರವಾರ ಮದ್ರಾಸ್ ಹೈಕೋರ್ಟ್‌ಗೆ ಸಲ್ಲಿಸುವ ನಿರೀಕ್ಷೆಯಿದೆ. 

ಟಿವಿಕೆಯು ಪಕ್ಷಗಳಾದ್ಯಂತ ರ್ಯಾಲಿಗಳಿಗೆ ಏಕರೂಪದ ನಿಯಮಗಳನ್ನು ಕೋರಿ ಈ ಹಿಂದೆ ನ್ಯಾಯಾಲಯದ ಮೊರೆ ಹೋಗಿತ್ತು, ಪೊಲೀಸರು ಟಿವಿಕೆಗೆ ಪ್ರತ್ಯೇಕವಾಗಿ ಅಪ್ರಾಯೋಗಿಕ ಮತ್ತು ಕಠಿಣ ಷರತ್ತುಗಳನ್ನು ವಿಧಿಸುತ್ತಿದ್ದಾರೆ ಎಂದು ಆರೋಪಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಕ್ಷಮಿಸು ಮಮ್ಮಿ, ಡೆತ್‌ನೋಟ್ ಬರೆದಿಟ್ಟು ಮೆಟ್ರೋ ಹಳಿಗೆ ಹಾರಿದ ವಿದ್ಯಾರ್ಥಿ