Select Your Language

Notifications

webdunia
webdunia
webdunia
Saturday, 12 April 2025
webdunia

ರೈತರ ಸಾಲಮನ್ನಾ ಆಗಿದೆ ಎಂದು ರಾಜ್ಯ ಸರ್ಕಾರ ಬೊಗಳೆ ಬಿಡುತ್ತಿದೆ- ಆರ್.ಅಶೋಕ್ ಆರೋಪ

ನವದೆಹಲಿ
ನವದೆಹಲಿ , ಶನಿವಾರ, 12 ಜನವರಿ 2019 (14:26 IST)
ನವದೆಹಲಿ : ಸಾಲಮನ್ನಾ ಲಾಲಿಪಾಪ್ ಎಂಬ ಮೋದಿ ಹೇಳಿಕೆ ಸರಿಯಿದೆ ಎಂದು ನವದೆಹಲಿಯಲ್ಲಿ ಮಾಜಿ ಡಿಸಿಎಂ ಆರ್. ಅಶೋಕ್ ಹೇಳಿದ್ದಾರೆ.


ಈ ಕುರಿತು ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ‘ರೈತರ ಸಾಲ ಎಷ್ಟಿದೆ ಎಂದು ರೈತರನ್ನೆ ಕೇಳುವ ಸರ್ಕಾರವಿದು. ರೈತರ ಸಾಲಮನ್ನಾ ಆಗಿದೆ ಎಂದು ಬೊಗಳೆ ಬಿಡುತ್ತಿದ್ದಾರೆ. ಸಾಲಮನ್ನಾಗೆ ಸರ್ಕಾರದ ಬಳಿ ಹಣವಿಲ್ಲ’ ಎಂದು ಹೇಳಿದ್ದಾರೆ.


‘ಸಾಲಬಾಧೆಯಿಂದ 250ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಲಮನ್ನಾ ಆಗಿದ್ದರೆ ರೈತರೇಕೆ ಆತ್ಮಹತ್ಯೆ ಮಾಡಿಕೊಳ್ತಿದ್ದರು. ರಾಜ್ಯ ಸರ್ಕಾರ ಟೆಂಡರ್ ಕೊಟ್ಟು ಹಣ ಹೊಡೆಯುತ್ತಿದೆ’ ಎಂದು ಅವರು ಆರೋಪಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಈ 100 ಮೀಟರ್ ಉದ್ದದ ದೋಸೆ ತಯಾರಿಸಿದ್ದೆಲ್ಲಿ ಗೊತ್ತಾ?