Publish Date: Thu, 19 Aug 2021 (09:09 IST)
Updated Date: Thu, 19 Aug 2021 (09:14 IST)
ರಾಯಗಢ : ದುರಂತ ಘಟನೆಯೊಂದರಲ್ಲಿ, ಒಡಿಶಾದ ರಾಯಗಡ ಜಿಲ್ಲೆಯಲ್ಲಿ 13 ವರ್ಷದ ವಿದ್ಯಾರ್ಥಿಯೊಬ್ಬ ಆನ್ ಲೈನ್ ತರಗತಿಗಳಿಗೆ ಹಾಜರಾಗಲು ಮೊಬೈಲ್ ನೆಟ್ ವರ್ಕ್ ಹುಡುಕಿಕೊಂಡು ಹತ್ತಿದ್ದ ಬೆಟ್ಟದ ಮೇಲಿನಿಂದ ಜಾರಿ ಬಿದ್ದು ಮೃತಪಟ್ಟಿರುವ ಘಟನೆ ನಡೆದಿದೆ.
ಮೃತನನ್ನು ಬುಡಕಟ್ಟು ಪ್ರಾಬಲ್ಯದ ರಾಯಗಡ ಜಿಲ್ಲೆಯ ಪದ್ಮಾಪುರ ಬ್ಲಾಕ್ ವ್ಯಾಪ್ತಿಯ ಪಂದ್ರಗಾಡ ಗ್ರಾಮದ ಆಂಡ್ರಿಯಾ ಜಗರಂಗ ಎಂದು ಗುರುತಿಸಲಾಗಿದೆ. ಕಟಕ್ ನ ಮಿಷನೆರಿ ಶಾಲೆಯ ವಿದ್ಯಾರ್ಥಿಯಾದ ಆಂಡ್ರಿಯಾ, ಕೋವಿಡ್ ಪ್ರೇರಿತ ಲಾಕ್ ಡೌನ್ ಅವಧಿಯಲ್ಲಿ ಮನೆಯಲ್ಲಿ ನಿಯಮಿತವಾಗಿ ಆನ್ ಲೈನ್ ತರಗತಿಗಳಿಗೆ ಹಾಜರಾಗುತ್ತಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ.
ಮಂಗಳವಾರ ಅವರ ಮೊಬೈಲ್ ಫೋನ್ ಗೆ ಯಾವುದೇ ಸಿಗ್ನಲ್ ಇಲ್ಲದ ಕಾರಣ, ಅವರು ಆನ್ ಲೈನ್ ತರಗತಿಗಳಿಗೆ ಹಾಜರಾಗಲು ನೆಟ್ ವರ್ಕ್ ಅನ್ನು ಹುಡುಕುತ್ತಾ ತಮ್ಮ ಗ್ರಾಮದ ಬಳಿಯ ಬೆಟ್ಟದ ಮೇಲೆ ಏರಿದ್ದರು. ದುರದೃಷ್ಟವಶಾತ್, ಭಾರಿ ಮಳೆ ಸುರಿಯಿತು, ಆಂಡ್ರಿಯಾ ತನ್ನ ಸಮತೋಲನವನ್ನು ಕಳೆದುಕೊಳ್ಳುವಂತೆ ಮಾಡಿತು. ತದನಂತರ, ಅವರು ಜಾರಿ ಕೆಳಗೆ ಬಿದ್ದರು.
ಗಂಭೀರ ಗಾಯಗೊಂಡ ವಿದ್ಯಾರ್ಥಿಯನ್ನು ಪದ್ಮಾಪುರ ಸಮುದಾಯ ಆರೋಗ್ಯ ಕೇಂದ್ರಕ್ಕೆ (ಸಿಎಚ್ ಸಿ) ಸಾಗಿಸಲಾಯಿತು, ಅಲ್ಲಿ ಅವರು ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು ಎಂದು ತಿಳಿದು ಬಂದಿದೆ..