Select Your Language

Notifications

webdunia
webdunia
webdunia
webdunia

ರಚ್ಚು ಐ ಲವ್ ಯು ಶೂಟಿಂಗ್ ವೇಳೆ ದುರಂತ: ನಿರ್ಮಾಪಕ ನಾಪತ್ತೆ!

ರಚ್ಚು ಐ ಲವ್ ಯು ಶೂಟಿಂಗ್ ವೇಳೆ ದುರಂತ: ನಿರ್ಮಾಪಕ ನಾಪತ್ತೆ!
bengaluru , ಸೋಮವಾರ, 9 ಆಗಸ್ಟ್ 2021 (17:37 IST)

ರಾಮನಗರ ಎಸ್ಪಿ ಎಸ್.ಗಿರೀಶ್ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಶೂಟಿಂಗ್ ವೇಳೆ ಇಬ್ಬರು ಹೈಟೆನ್ಷನ್ ವಿದ್ಯುತ್ ತಂತಿ ತಗುಲಿ ಇಬ್ಬರು ಗಾಯಗೊಂಡಿದ್ದರು. ಅದರಲ್ಲಿ ವಿವೇಕ್ ಮೃತಪಟ್ಟರೆ, ರಂಜಿತ್ ಸ್ಥಿತಿ ಗಂಭೀರವಾಗಿದೆ ಎಂದರು.

ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದು, ಕ್ರೇನ್ ಚಾಲಕ, ಮುನಿಯಪ್ಪ ಜಮೀನು ಮಾಲೀಕ ಪುಟ್ಟರಾಜು, ನಿರ್ದೇಶಕ ಶಂಕರ್, ಸಾಹಸ ನಿರ್ದೇಶಕ ವಿನೋದ್ ಪೋಲಿಸರು ವಶಕ್ಕೆ ಪಡೆಯಲಾಗಿದೆ ಎಂದರು.

ಚಿತ್ರೀಕರಣ ನಡೆಸಲು ಪೋಲಿಸರ ಅನುಮತಿ ಪಡೆದಿರಲಿಲ್ಲ. ಆದ್ದರಿಂದ ಬಿಡದಿ ಪೋಲಿಸರು ನಾಲ್ವರನ್ನು ವಶಕ್ಕೆ ಪಡೆದಿದ್ದು, ನಿರ್ಮಾಪಕ ಗುರುದೇಶ್ ಪಾಂಡೆ ನಾಪತ್ತೆಯಾಗಿದ್ದು, ಅವರನ್ನು ಹುಡುಕಲಾಗುತ್ತಿದೆ ಎಂದರು.

ಮೃತ ವಿವೇಕ್ ಕುಟುಂಬದವರು ಚಿತ್ರ ತಂಡದ ವಿರುದ್ಧ ದೂರು ಕೊಡಲು ನಿರ್ಧರಿಸಿದ್ದಾರೆ ಎನ್ನಲಾಗಿದ್ದು, ಈ ಸಂಬಂಧ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸಲಾಗುವುದು ಎಂದು ಅವರು ಹೇಳಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಅಜೇಯ್ ರಾವ್ ಗೆ ಫೈಟಿಂಗ್ ಹೇಳಿಕೊಡುತ್ತಲೇ ಇನ್ನಿಲ್ಲವಾದ ವಿವೇಕ್: ವಿಡಿಯೋ ವೈರಲ್