Webdunia - Bharat's app for daily news and videos

Install App

ಕೋಪದಲ್ಲಿ ಬ್ಯಾಟ್‍ನಿಂದ ಹೊಡೆದು ಪತ್ನಿಯನ್ನು ಕೊಂದ! ಮುಂದೇನಾಯ್ತು?

Webdunia
ಸೋಮವಾರ, 3 ಜನವರಿ 2022 (09:31 IST)
ಚೆನ್ನೈ  : ಕೋಪದ ಭರದಲ್ಲಿ ಬ್ಯಾಟ್ನಿಂದ ಹೊಡೆದು ಪತ್ನಿಯನ್ನು ಕೊಂದು, ಪುತ್ರರರ ಕತ್ತು ಹಿಸುಕಿ ಕೊಲೆಗೈದು ನಂತರ ತಾನು ನೇಣಿಗೆ ಶರಣಾದ ಘಟನೆ ಪೆರುಂಗುಡಿಯಲ್ಲಿ ನಡೆದಿದೆ.
ಮಣಿಕಂದನ್(35), ತರಗ ಪ್ರಿಯಾ(30), ಮಕ್ಕಳಾದ ತರಣ್ (11) ಮತ್ತು ಒಂದೂವರೆ ವರ್ಷದ ತಗನ್ ಮೃತರಾಗಿದ್ದಾರೆ. ಪೊಲೀಸರ ಪ್ರಕಾರ, ಮಣಿಕಂದನ್ ಖಾಸಗಿ ಬ್ಯಾಂಕ್ನಲ್ಲಿ ಕೆಲಸ ಮಾಡುತ್ತಿದ್ದ. ಮಕ್ಕಳು, ಪತ್ನಿಯನ್ನುಕೊಂದು ತಾನೂ ಆತ್ಮಹತ್ಯೆಮಾಡಿಕೊಂಡಿದ್ದಾನೆ. 

ಪೆರುಂಗುಡಿಯಲ್ಲಿ ಅಪಾರ್ಟ್ ಮೆಂಟ್ನಲ್ಲಿ  ಮಣಿಕಂದನ್ ಕುಟುಂದೊಂದಿಗೆ ವಾಸವಾಗಿದ್ದರು. ಮನೆಯ ಬಾಗಿಲು ಮುಚ್ಚಿದ್ದರಿಂದ ಅನುಮಾನಗೊಂಡ ನೆರೆಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದು,  ಪೊಲೀಸರು ಮನೆಯ ಬಾಗಿಲು ಹೊಡೆದು ನೋಡಿದಾಗ ಮಣಿಕಂದನ್ ದೇಹ ನೇಣು ಬಿಗಿದ ಸ್ಥಿತಿಯಲ್ಲಿ ಕಂಡಿತ್ತು. 

ದಂಪತಿ ನಡುವೆ ಸಾಲದ ವಿಚಾರವಾಗಿ ಆಗಾಗ ಜಗಳ ನಡೆಯುತ್ತಿತ್ತು. ಕೋಪದ ಭರದಲ್ಲಿ ಮಣಿಕಂದನ್ ಬ್ಯಾಟ್ನಿಂದ ಹೊಡೆದು ತನ್ನ ಹೆಂಡತಿ ಕೊಂದಿದ್ದಾನೆ. ನಂತರ ಮಕ್ಕಳನ್ನು ಕೊಂದು ತಾನೂ ನೇಣು ಹಾಕಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಅಪರಾಧ ನಡೆದ ಸ್ಥಳವನ್ನು ನೋಡಿದಾಗ, ಮಣಿಕಂದನ್ ಮೊದಲು ತನ್ನ ಹೆಂಡತಿಯನ್ನು ಕೊಲೆ ಮಾಡಿ ನಂತರ ತನ್ನ ಇಬ್ಬರು ಗಂಡುಮಕ್ಕಳನ್ನು ಕತ್ತು ಹಿಸುಕಿ ಕೊನೆಗೆ ನೇಣು ಹಾಕಿಕೊಂಡಿರಬೇಕು, ತನಿಖೆ ಮಾಡುತ್ತಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments