Publish Date: Mon, 20 Jul 2026 (11:59 IST)
Updated Date: Mon, 20 Jul 2026 (12:04 IST)
ರೈಲು ಪ್ರಯಾಣದಲ್ಲಿ ಕಳ್ಳತನದ ಪ್ರಕರಣಗಳು ಹೊಸದೇನಲ್ಲ. ಆದರೆ ಇತ್ತೀಚೆಗೆ ಚಲಿಸುವ ರೈಲೊಂದರಲ್ಲಿ ನಡೆದ ಘಟನೆಯೊಂದು ಸಾರ್ವಜನಿಕರಲ್ಲಿ ತೀವ್ರ ಚರ್ಚೆಯನ್ನು ಹುಟ್ಟುಹಾಕಿದೆ. ಮೊಬೈಲ್ ಕಳ್ಳತನ ಮಾಡಿದ ಯುವಕನಿಗೆ ಸ್ಥಳದಲ್ಲೇ ಶಿಕ್ಷೆ ನೀಡಲು ಹೋಗಿ, ಅವನ ಜೀವವನ್ನೇ ಅಪಾಯಕ್ಕೆ ತಳ್ಳಿದ ಘಟನೆ ಇಡೀ ನಾಗರಿಕ ಸಮಾಜ ತಲೆತಗ್ಗಿಸುವಂತೆ ಮಾಡಿದೆ.
ಕಳ್ಳತನ ಮಾಡುವುದು ಎಷ್ಟು ದೊಡ್ಡ ಅಪರಾಧವೋ, ಅದಕ್ಕೆ ಕಾನೂನುಬಾಹಿರವಾಗಿ ಶಿಕ್ಷೆ ನೀಡುವುದು ಕೂಡ ಅಷ್ಟೇ ದೊಡ್ಡ ತಪ್ಪು ಎಂಬುದಕ್ಕೆ ಈ ಘಟನೆ ಒಂದು ಕನ್ನಡಿಯಾಗಿದೆ.
ವರದಿಗಳ ಪ್ರಕಾರ, ಚಲಿಸುವ ರೈಲಿನಲ್ಲಿ ಯುವಕನೊಬ್ಬ ಪ್ರಯಾಣಿಕನೊಬ್ಬನ ಮೊಬೈಲ್ ಫೋನ್ ಅನ್ನು ಕದ್ದು ಪರಾರಿಯಾಗಲು ಯತ್ನಿಸಿದ್ದಾನೆ. ಆದರೆ ರೈಲು ವೇಗವಾಗಿ ಚಲಿಸುತ್ತಿದ್ದರಿಂದ ಆತ ತಕ್ಷಣ ಇಳಿಯಲು ಸಾಧ್ಯವಾಗದೆ, ರೈಲಿನ ಬಾಗಿಲಿನ ಹ್ಯಾಂಡಲ್ ಹಿಡಿದು ಅಪಾಯಕಾರಿ ಸ್ಥಿತಿಯಲ್ಲಿ ನೇತಾಡುತ್ತಿದ್ದಾನೆ.
ತನ್ನ ಮೊಬೈಲ್ ಕಳೆದುಕೊಂಡ ಆಕ್ರೋಶದಲ್ಲಿದ್ದ ಪ್ರಯಾಣಿಕ, ಕೋಪದ ಭರದಲ್ಲಿ ನೇತಾಡುತ್ತಿದ್ದ ಕಳ್ಳನಿಗೆ ಜೋರಾಗಿ ಒದ್ದಿದ್ದಾನೆ. ರೈಲಿನ ಬಾಗಿಲಲ್ಲಿ ಬ್ಯಾಲೆನ್ಸ್ ತಪ್ಪಿದ ಆ ಯುವಕ ನೇರವಾಗಿ ಚಲಿಸುತ್ತಿದ್ದ ರೈಲಿನಿಂದ ಕೆಳಗೆ ಬಿದ್ದಿದ್ದಾನೆ. ರೈಲಿನ ವೇಗ ಹೆಚ್ಚಾಗಿದ್ದ ಕಾರಣ ಆತನ ಜೀವಕ್ಕೆ ತೀವ್ರ ಅಪಾಯ ಉಂಟಾಗಿದೆ.
ಆ ಯುವಕ ಕಳ್ಳತನ ಮಾಡಿದ್ದು ಅಕ್ಷರಶಃ ಅಪರಾಧ. ಆತನನ್ನು ಹಿಡಿದು ರೈಲ್ವೆ ಪೊಲೀಸ್ ಸಿಬ್ಬಂದಿಗೆ ಒಪ್ಪಿಸಬೇಕಾಗಿದ್ದು ಪ್ರತಿಯೊಬ್ಬ ಜವಾಬ್ದಾರಿಯುತ ನಾಗರಿಕನ ಕರ್ತವ್ಯ. ಆದರೆ, ಕಾನೂನನ್ನು ಕೈಗೆತ್ತಿಕೊಂಡು ಆತನ ಜೀವಕ್ಕೆ ಕುತ್ತು ತರುವಂತೆ ಮಾಡಿದ್ದು ಯಾವುದೇ ರೀತಿಯಲ್ಲೂ ಸಮರ್ಥನೀಯವಲ್ಲ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ