Select Your Language

Notifications

webdunia
webdunia
webdunia
webdunia

ಶೀಲ ಶಂಕಿಸಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪಾಪಿ ಪತಿ!

ಶೀಲ ಶಂಕಿಸಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪಾಪಿ ಪತಿ!
ಬೆಂಗಳೂರು , ಸೋಮವಾರ, 29 ನವೆಂಬರ್ 2021 (10:02 IST)
ಬೆಂಗಳೂರು : ಶೀಲ ಶಂಕಿಸಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ತನ್ನ ಪತ್ನಿಯನ್ನೇ ಹತ್ಯೆಗೈದು ಪರಾರಿಯಾಗಿದ್ದವನು ಆಂಧ್ರದಲ್ಲಿ ಬೀದಿ ಹೆಣವಾಗಿ ಪತ್ತೆಯಾಗಿದ್ದಾನೆ.
ರಾಜೇಂದ್ರ ನಗರದ ಆಯೇಷಾ (45) ಕೊಲೆಯಾದವರು. ಇವರ ಪತಿ ನಿಸಾರ್ (50) ಆಂಧ್ರದಲ್ಲಿ ಶವವಾಗಿ ಪತ್ತೆಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದರು. ಹೆಚ್ಚಾಗಿ ಮನೆಯಲ್ಲಿ ಇರದ ನಿಸಾರ್, ಮಸೀದಿಗಳಲ್ಲಿ ಚಂದಾ ವಸೂಲಿ ಮಾಡಿ ಮದರಸಗೆ ನೀಡುವ ಕೆಲಸ ಮಾಡುತ್ತಿದ್ದ.
ಮನೆಗೆ ಬಂದ ವೇಳೆಯಲ್ಲೆಲ್ಲ ಪತ್ನಿಯ ಶೀಲ ಶಂಕಿಸಿ ಆಕೆಯೊಂದಿಗೆ ಜಗಳ ಮಾಡುತ್ತಿದ್ದ. ಇದೇ ರೀತಿ ಜಗಳವಾಗುತ್ತಿದ್ದರಿಂದ ನ.19ರಂದು ಪತ್ನಿಯನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದ.
ಪತ್ನಿ ಕೊಲೆ ಮಾಡಲೆಂದು ಬಂಕ್ನಿಂದ ಪೆಟ್ರೋಲ್ ಖರೀದಿಸಿ ಮನೆಗೆ ಬಂದಿದ್ದ. ಆಯೇಷಾ ಜತೆಗೆ ಮೊಮ್ಮಗಳೂ ಇದ್ದಳು. ಮಗು ಮನೆಯಲ್ಲಿದ್ದರೆ ಪತ್ನಿ ಹತ್ಯೆ ಮಾಡುವುದು ಕಷ್ಟ ಎಂದು ಭಾವಿಸಿ ಮೊದಲು ಅಳಿಯನಿಗೆ ಕರೆ ಮಾಡಿ, ಮೊಮ್ಮಗಳನ್ನು ನೋಡಬೇಕು ಅನಿಸುತ್ತಿದೆ.
ನೀಲಸಂದ್ರ ಸಂಬಂಧಿ ಮನೆಗೆ ಕರೆತರುವಂತೆ ಹೇಳಿದ್ದ. ಅದರಂತೆ ಅಳಿಯ ತನ್ನ ಮಗಳನ್ನು ಕರೆದುಕೊಂಡು ನೀಲಸಂದ್ರ ಕಡೆ ಹೋಗುತ್ತಿದ್ದಂತೆಯೇ, ಇತ್ತ ಮನೆಯಲ್ಲಿದ್ದ ಮಗ ಮತ್ತು ಸೊಸೆ ಕೆಲಸಕ್ಕೆ ತೆರಳಿದ್ದರು.
ಇದೇ ಸಮಯಕ್ಕೆ ಕಾಯುತ್ತಿದ್ದ ಆರೋಪಿ ನಿಸಾರ್ ಮಧ್ಯಾಹ್ನ 3 ಗಂಟೆಗೆ ತನ್ನ ಮನೆಗೆ ಬಂದು ಪತ್ನಿ ಬಳಿ ಸಣ್ಣ ಸಿಲಿಂಡರ್ ಕೊಡುವಂತೆ ಸೂಚಿಸಿದ್ದ. ಪತ್ನಿ ಸಿಲಿಂಡರ್ ತರಲು ಹೋಗುತ್ತಿದ್ದಂತೆ ಆಕೆಯ ಮೇಲೆ ಪೆಟ್ರೋಲ್ ಸುರಿದಿದ್ದ. ಆತಂಕಗೊಂಡ ಪತ್ನಿ ಆಯೇಷಾ ಪತಿಯನ್ನು ಹೊರ ಹಾಕಿ ತಕ್ಷಣ ಬಾಗಿಲು ಲಾಕ್ ಮಾಡಿಕೊಂಡಿದ್ದಳು.
ಆಕ್ರೋಶಗೊಂಡ ನಾಸಿರ್ ಮನೆಯ ಕಿಟಕಿ ಗಾಜನ್ನು ಒಡೆದಿದ್ದಾನೆ. ಈ ವೇಳೆ ಒಡೆದ ಗಾಜಿನ ಚೂರು ನಾಸಿರ್ ಬಲಗೈ ಸೀಳಿ ರಕ್ತ ಹರಿದಿತ್ತು. ಇಷ್ಟಾದರೂ ಸುಮ್ಮನಾಗದ ಆರೋಪಿ ನಾಸಿರ್ ಕಿಟಕಿಯಿಂದಲೇ ಬೆಂಕಿ ಕಡ್ಡಿ ಗೀರಿ ಆಯೇಷಾ ಮೇಲೆ ಎಸೆದಿದ್ದ. ಪರಿಣಾಮ ಆಯೇಷಾ ಮೈಗೆ ಬೆಂಕಿ ಹೊತ್ತಿಕೊಂಡಿತ್ತು.
ಕಿಟಕಿ ಬಳಿ ಇದ್ದ ನಾಸಿರ್ ಮುಖಕ್ಕೂ ಬೆಂಕಿಯಿಂದ ಸುಟ್ಟ ಗಾಯಗಳಾಗಿತ್ತು. ಆಯೇಷಾ ಚೀರಾಟ ಕೇಳಿ ನೆರೆ-ಹೊರೆಯವರು ಬರುವ ವೇಳೆ ನಿಸಾರ್ ಆಂಧ್ರಪ್ರದೇಶದ ಬಸ್ಸನ್ನೇರಿ ಪರಾರಿಯಾಗಿದ್ದ.

 

Share this Story:

Follow Webdunia kannada

ಮುಂದಿನ ಸುದ್ದಿ

ಗಗನಕ್ಕೇರಿದ ಬೆಲೆಯಿಂದ ಕಂಗಾಲಾದ ಗ್ರಾಹಕರು!