Publish Date: Tue, 22 Jun 2021 (09:16 IST)
Updated Date: Tue, 22 Jun 2021 (09:18 IST)
ನವದೆಹಲಿ: ನಿವೃತ್ತಿ ಘೋಷಿಸಿದ್ದ ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಇದೀಗ ಎರಡನೇ ಬಾರಿಗೆ ಎನ್ ಸಿಪಿ ನಾಯಕ ಶರದ್ ಪವಾರ್ ಜೊತೆ ಮೀಟಿಂಗ್ ನಡೆಸಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಪ.ಬಂಗಾಲ ಚುನಾವಣೆ ಬಳಿಕ ಇನ್ನು ರಾಜಕೀಯ ತಂತ್ರಗಾರಿಕೆ ಕೆಲಸ ಮಾಡಲ್ಲ ಎಂದಿದ್ದ ಪ್ರಶಾಂತ್ ಕಿಶೋರ್ ಇದೀಗ ಎರಡನೇ ಬಾರಿಗೆ ಶರದ್ ಪವಾರ್ ರನ್ನು ಭೇಟಿ ಮಾಡಿದ್ದಾರೆ.
ಮೂಲಗಳ ಪ್ರಕಾರ 2024 ರ ಚುನಾವಣೆಗೆ ಪವಾರ್ ಈಗಿಂದಲೇ ಸಿದ್ಧತೆ ನಡೆಸುತ್ತಿದ್ದಾರೆ. ಅದಕ್ಕಾಗಿ ಈಗಲೇ ಯೋಜನೆ ರೂಪಿಸುತ್ತಿದ್ದಾರೆ ಎನ್ನಲಾಗಿದೆ. ಇದರ ತಂತ್ರಗಾರಿಕೆಯ ಹೊಣೆಯನ್ನು ಪ್ರಶಾಂತ್ ಕಿಶೋರ್ ಗೆ ವಹಿಸುವ ಸಾಧ್ಯತೆಯಿದೆ.