Select Your Language

Notifications

webdunia
webdunia
webdunia
webdunia

ಭಾರತದಲ್ಲಿ ಇನ್ನು ಗಗನಯಾತ್ರೆಗೂ ಮೀಸಲಾತಿ ಬೇಕಂತೆ

Shubhanshu Shukla

Krishnaveni K

ನವದೆಹಲಿ , ಶುಕ್ರವಾರ, 27 ಜೂನ್ 2025 (17:59 IST)
ನವದೆಹಲಿ: ಮೊನ್ನೆಯಷ್ಟೇ ಭಾರತದ ಶುಭಾಂಶು ಶುಕ್ಲಾ ಬಾಹ್ಯಾಕಾಶದತ್ತ ಪ್ರಯಾಣ ಬೆಳೆಸಿದ್ದಾರೆ. ಇದರ ಬೆನ್ನಲ್ಲೇ ಕೆಲವರು ಸೋಷಿಯಲ್ ಮೀಡಿಯಾಗಳಲ್ಲಿ ತಗಾದೆ ತೆಗೆದಿದ್ದು, ಇನ್ನು ಬಾಹ್ಯಾಕಾಶ ಯಾತ್ರೆಗೂ ಮೀಸಲಾತಿ ಬೇಕು ಎಂದಿದ್ದಾರೆ.

ಭಾರತದಿಂದ ಇದುವರೆಗೆ ಕೇವಲ ಎರಡೇ ಎರಡು ಗಗನಯಾತ್ರಿಗಳು ಬಾಹ್ಯಾಕಾಶಕ್ಕೆ ತೆರಳಿದ್ದಾರೆ. ಮೊದಲನೆಯವರು ರಾಕೇಶ್ ಶರ್ಮಾ, ಎರಡನೆಯವರು ಶುಭಾಂಶು ಶುಕ್ಲ. ಇದೀಗ ಟ್ವಿಟರಿಗರಲ್ಲಿ ಕೆಲವರು ಇವರಿಬ್ಬರೂ ಬ್ರಾಹ್ಮಣರು ಎಂದು ತಗಾದೆ ತೆಗೆದಿದ್ದಾರೆ.

ಈಗ ಗಗಯನಯಾತ್ರೆ ಮಾಡಿರುವ ಇಬ್ಬರೂ ಬ್ರಾಹ್ಮಣರು. ಬ್ರಾಹ್ಮಣರ ಜನಸಂಖ್ಯೆ ಇರುವುದು ಕೇವಲ 3%. ಇವರಿಗೆ ಅಘೋಷಿತ ಮೀಸಲಾತಿಯಿದೆ. ಇದರಿಂದಾಗಿಯೇ ಮೊದಲ ಪ್ರಾಶಸ್ತ್ಯ ಇವರಿಗೇ ಸಿಗುತ್ತಿದೆ. ಹೀಗಾಗಿ ಮುಂದಿನ ಸಲದಿಂದ ಗಗನಯಾತ್ರೆಗೂ ಮೀಸಲಾತಿ ಇರಬೇಕು ಎಂದು ಕೆಲವರು ಆಗ್ರಹಿಸಿದ್ದಾರೆ.

ಮತ್ತೆ ಕೆಲವರು ಇದಕ್ಕೆ ತದ್ವಿರುದ್ಧ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಒಂದು ಕ್ಷೇತ್ರದಲ್ಲಿ ಮೀಸಲಾತಿ ಇಲ್ಲ. ಕೇವಲ ಪರಿಶ್ರಮದ ಆಧಾರದಲ್ಲಿ ಕಳುಹಿಸಲಾಗುತ್ತಿದೆ. ಹೀಗಾಗಿಯೇ ಈ ಕ್ಷೇತ್ರ ಇಷ್ಟು ಯಶಸ್ವಿಯಾಗುತ್ತಿದೆ ಎಂದು ಕೊಂಡಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಂತಹ ಹೇಳಿಕೆಯನ್ನು ನಿರ್ಲಕ್ಷಿಸಿ: ರಾಜಣ್ಣ ಹೇಳಿಕೆಯನ್ನು ತಳ್ಳಿಹಾಕಿದ ಸಿಎಂ ಸಿದ್ದರಾಮಯ್ಯ