Select Your Language

Notifications

webdunia
webdunia
webdunia
webdunia

ಮಾಧ್ಯಮದೆದುರು ಅಂತರಾಳ ಬಿಚ್ಚಿಟ್ಟ ರಜನಿಕಾಂತ್

ಮಾಧ್ಯಮದೆದುರು ಅಂತರಾಳ ಬಿಚ್ಚಿಟ್ಟ ರಜನಿಕಾಂತ್
ಚೆನ್ನೈ , ಬುಧವಾರ, 3 ಜನವರಿ 2018 (07:01 IST)
ಚೆನ್ನೈ : ಸೂಪರ್ ಸ್ಟಾರ್ ರಜನಿಕಾಂತ್ ಅವರು ಈಗಾಗಲೇ ಹೊಸ ರಾಜಕೀಯ ಪಕ್ಷವನ್ನು ಘೋಷಿಸಿದ್ದು, ನಂತರ ಪಕ್ಷದ ವೆಬ್ ಸೈಟ್ ಕೂಡ ಬಿಡುಗಡೆ ಮಾಡಿ ಜನರಲ್ಲಿ ಸದಸ್ಯತ್ವ ನೊಂದಾಯಿಸಲು ಹೇಳಿದ್ದರು. ಮಾಧ್ಯಮವೊಂದರಲ್ಲಿ ತಮ್ಮ ಜೀವನದ ಕೆಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ.


ಅವರು ಕೆಲ ಕಾಲ ಬೆಂಗಳೂರಿನಲ್ಲಿ  ಪತ್ರಿಕೆಯೊಂದರಲ್ಲಿ ಪ್ರೂಫ್ ರೀಡರ್ ಕೆಲಸ ಮಾಡಿದ್ದು, ನಂತರ ಬಸ್ ಕಂಡೆಕ್ಟರ್ ಆಗಿ ಕೆಲಸ ಮಾಡಿರುವುದಾಗಿ ಹೇಳಿದರು. ನಂತರ ಅವರು ಚಿತ್ರರಂಗಕ್ಕೆ ಪ್ರವೇಶಿಸಿ ಮತ್ತೆ ಪತ್ರಕರ್ತರ ಒಡನಾಟ ಬೆಳೆಯಿತು ಎನ್ನುವುದಾಗಿ ತಿಳಿಸಿದರು. ತಮಿಳುನಾಡು ಹಲವು ಕ್ರಾಂತಿಗಳು ನಡೆದ ಸ್ಥಳ, ಅಲ್ಲಿಂದಲ್ಲೇ  ರಾಜಕೀಯ ಆರಂಭಿಸಿದೆ. ಮುಂದೆಯೂ ಅಲ್ಲಿ ಹೊಸ ಕ್ರಾಂತಿ ನಡೆಯುವ ವಿಶ್ವಾಸವಿದೆ. ಪಕ್ಷದ ಅಭ್ಯರ್ಥಿಗಳನ್ನು 234 ಕ್ಷೇತ್ರಗಳಲ್ಲಿ ಕಣಕ್ಕಿಳಿಸಲಾಗುವುದು ಎಂದು ಹೇಳಿದ್ದಾರೆ. ಹಾಗೆ ತಾನು ಮಾಧ್ಯಮಗಳಿಂದ ಸ್ವಲ್ಪ ದೂರವಿದಿದ್ದು, ಈಗ ರಾಜಕೀಯ ಪ್ರವೇಶಿಸಿದ್ದರಿಂದ ಎಲ್ಲರ ಸಹಕಾರ ಬಯಸುತ್ತಿರುವುದಾಗಿ ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯ ಬಿಜೆಪಿಯಲ್ಲಿನ ದಿನದಿನದ ಮಾಹಿತಿ ಪಡೆಯುತ್ತಿರುವ ಅಮಿತ್ ಶಾ