Publish Date: Mon, 18 Dec 2017 (13:21 IST)
Updated Date: Mon, 18 Dec 2017 (13:26 IST)
ಬೆಂಗಳೂರು:ಗುಜರಾತ್ ಹಾಗೂ ಹಿಮಾಚಲ ಪ್ರದೇಶದ ಚುನಾವಣೆಯಲ್ಲಿ ಬಿಜೆಪಿ ಗೆಲುವನ್ನು ಸಾಧಿಸಿರುವುದರ ಕುರಿತು ಬಿಜೆಪಿ ಮುಖಂಡರಾದ ಬಿ.ಎಸ್ ಯಡಿಯೂರಪ್ಪ ಅವರು ಇದು ಬಿಜೆಪಿಯ ದೊಡ್ಡ ಸಾಧನೆ ಎಂದು ಮಾಧ್ಯಮಗಳ ಮುಂದೆ ಹೇಳಿದ್ದಾರೆ.
ಇವರು ತಮ್ಮ ನಿವಾಸದಲ್ಲೆ ಕುಳಿತು ಚುನಾವಣೆಯ ಫಲಿತಾಂಶವನ್ನು ವೀಕ್ಷಿಸಿದ್ದಾರೆ,.ಈ ಫಲಿತಾಂಶದಿಂದ ಕರ್ನಾಟಕದಲ್ಲೂ ಬಿಜೆಪಿಗೆ ಗೆಲ್ಲುವ ಶಕ್ತಿ ಬಂದಂತಾಗಿದ್ದು, ಅಮಿತ್ ಶಾ, ಪ್ರಧಾನಿ ಮೋದಿ ತಮ್ಮ ಗೆಲುವಿಗೆ ದೊಡ್ಡ ಶಕ್ತಿ ಎಂದು ಹೇಳಿದ್ದಾರೆ.
ಹಾಗೆ ಈ ಗೆಲುವು ಅಮಿತ್ ಶಾ, ಪ್ರಧಾನಿ ಮೋದಿ ಅವರಿಗೆ ಸಂದ ಜಯ, ಇದು ಕರ್ನಾಟಕದ ಚುನಾವಣೆಯ ಮೇಲೂ ಪ್ರಭಾವ ಬೀರಲಿದೆ. ರಾಜ್ಯದ ಚುನಾವಣೆಯಲ್ಲಿ ಬಿಜೆಪಿ 150 ಸ್ಥಾನ ಗೆಲ್ಲೊದು ಖಚಿತ ಎಂದು ಹೇಳಿದ್ದಾರೆ.