Select Your Language

Notifications

webdunia
webdunia
webdunia
webdunia

ಕಾಶ್ಮೀರದತ್ತ ರಾಹುಲ್ ಗಾಂಧಿ; ಬರಬೇಡಿ ಅಂತಿದೆ ಸ್ಥಳೀಯಾಡಳಿತ

ಕಾಶ್ಮೀರದತ್ತ ರಾಹುಲ್ ಗಾಂಧಿ; ಬರಬೇಡಿ ಅಂತಿದೆ ಸ್ಥಳೀಯಾಡಳಿತ
ನವದೆಹಲಿ , ಶನಿವಾರ, 24 ಆಗಸ್ಟ್ 2019 (10:01 IST)
ನವದೆಹಲಿ: ಜಮ್ಮು ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದು ಮಾಡಿದ ಬಳಿಕ ಅಲ್ಲಿನ ಸ್ಥಿತಿಗತಿ ಅರಿಯಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ವಿವಿಧ ವಿರೋಧ ಪಕ್ಷದ ನಾಯಕರು ಕಾಶ್ಮೀರಕ್ಕೆ ಭೇಟಿ ನೀಡಲು ಹೊರಟಿದ್ದಾರೆ.


ಆದರೆ ರಾಹುಲ್ ಗಾಂಧಿ ನೇತೃತ್ವದ ವಿರೋಧ ಪಕ್ಷದ ನಾಯಕರ ಭೇಟಿಗೆ ಸ್ಥಳೀಯಾಡಳಿತ ವಿರೋಧ ವ್ಯಕ್ತಪಡಿಸಿದೆ. ಸದ್ಯದ ಪರಿಸ್ಥಿತಿಯಲ್ಲಿ ಇಲ್ಲಿಗೆ ಭೇಟಿ ನೀಡಬೇಡಿ ಎಂದು ಮನವಿ ಮಾಡಿದೆ.

ಆದರೆ ಇದನ್ನು ಲೆಕ್ಕಿಸದೇ ರಾಹುಲ್ ಗಾಂಧಿ, ಗುಲಾಮ್ ನಬಿ ಆಜಾದ್ ಸೇರಿದಂತೆ ಸಿಪಿಐಂ, ಎನ್ ಸಿಪಿ, ಆರ್ ಜೆಡಿ, ಡಿಎಂಕೆ, ಟಿಎಂಸಿ ಸೇರಿದಂತೆ ವಿರೋಧ ಪಕ್ಷದ ಪ್ರಮುಖ ನಾಯಕರು ತಯಾರಿ ನಡೆಸಿದ್ದಾರೆ. ಆದರೆ ಅಹಿತಕರ ಘಟನೆ ನಡೆಯಬಹುದಾದ ಹಿನ್ನಲೆಯಲ್ಲಿ ಯಾವುದೇ ರಾಜಕೀಯ ನಾಯಕರಿಗೆ ರಾಜ್ಯ ಪ್ರವೇಶಿಸಲು ಸ್ಥಳೀಯಾಡಳಿತ ಅನುಮತಿ ನೀಡಿಲ್ಲ. ಹೀಗಾಗಿ ಇಂದು ಮತ್ತೊಂದು ಸಂಘರ್ಷ ನಡೆಯಬಹುದಾದ ಸಾಧ‍್ಯತೆಯಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸ್ಕರ್ಟ್ ಧರಿಸುತ್ತಿದ್ದ ಯುವತಿಯರಿಗೆ ವ್ಯಕ್ತಿಯೊಬ್ಬ ಮಾಡುತ್ತಿದ್ದದ್ದೇನು ಗೊತ್ತಾ?