Select Your Language

Notifications

webdunia
webdunia
webdunia
webdunia

ಪೊಲೀಸರೇ ಕಳ್ಳರಾದಾಗ: ಯುವಕನಿಂದ 1.5 ಲಕ್ಷ ಕಿತ್ತುಕೊಂಡ ಪರಾರಿ

ಪೊಲೀಸರೇ ಕಳ್ಳರಾದಾಗ: ಯುವಕನಿಂದ 1.5 ಲಕ್ಷ ಕಿತ್ತುಕೊಂಡ ಪರಾರಿ
ಜಬಲ್‌ಪುರ್ , ಶುಕ್ರವಾರ, 8 ಸೆಪ್ಟಂಬರ್ 2017 (14:59 IST)
ಪೊಲೀಸರ ಆರು ಜನರ ತಂಡವೊಂದು ಯುವಕನ ಮೇಲೆ ಗುಂಡಿನ ದಾಳಿ ನಡೆಸಿ 1.5 ಲಕ್ಷ ರೂಪಾಯಿ ಕಿತ್ತುಕೊಂಡು ಪರಾರಿಯಾದ ಆಘಾತಕಾರಿ ಘಟನೆ ಮಧ್ಯಪ್ರದೇಶದ ಜಬಲ್‌ಪುರ್‌ನಲ್ಲಿ ವರದಿಯಾಗಿದೆ.
ಪೊಲೀಸ್ ಸಮವಸ್ತ್ರ ಧರಿಸಿ ರಕ್ಷಕರಾಗಬೇಕಾದ ಪೊಲೀಸರೇ ಕಳ್ಳರಂತೆ ಹಣವನ್ನು ಲೂಟಿ ಮಾಡಿದ್ದಲ್ಲದೇ ಗುಂಡಿನ ದಾಳಿ ನಡೆಸಿ ಹೇಯ ಕೃತ್ಯ ಮೆರೆದಿದ್ದಾರೆ.
 
ಆರೋಪಿ ಪೊಲೀಸರನ್ನು ಅಮಾನತುಗೊಳಿಸಲಾಗಿದೆ ಎಂದು ಪೊಲೀಸ್ ನಿರ್ದೇಶಕ ಶಶಿಕಾಂತ್ ಶುಕ್ಲಾ ತಿಳಿಸಿದ್ದಾರೆ.
 
ಬುಧವಾರದಂದು ರಾತ್ರಿ 11.30 ಗಂಟೆಗೆ ಪೊಲೀಸರ ಗುಂಡಿನಿಂದ ಗಾಯಗೊಂಡ ಅಶೋಕ್ ಗಾವಂಕರ್, ಮೂತ್ರ ವಿಸರ್ಜನೆಗಾಗಿ ಕಾರು ನಿಲ್ಲಿಸಿದ್ದರು. ಮೂತ್ರ ವಿಸರ್ಜನೆ ಮಾಡುತ್ತಿರುವ ಸಂದರ್ಭದಲ್ಲಿ ಅಲ್ಲಿಗೆ ಬಂದ ಪೊಲೀಸರು ತಮ್ಮ ಕಾರಿನಲ್ಲಿಯೇ ಕುಳಿತು ಅಶೋಕ್ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಗುಂಡಿನ ದಾಳಿಯಿಂದ ಪಾರಾಗಲು ಓಡುತ್ತಿರುವಾಗ ಗುಂಡು ತಗುಲಿ ಪ್ರಜ್ಞೆಯನ್ನು ಕಳೆದುಕೊಂಡಿದ್ದಾರೆ.  
 
ಪೊಲೀಸರು ಅಶೋಕ್ ಅವರ ಬಳಿಯಿದ್ದ 1.5 ಲಕ್ಷ ರೂಪಾಯಿಗಳ ಬ್ಯಾಗ್ ಕಿತ್ತುಕೊಂಡು, ಗಂಭೀರವಾಗಿ ಗಾಯಗೊಂಡಿದ್ದ ಅಶೋಕ್‌ನನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ. ಅಶೋಕ್ ತಮ್ಮ ಗೆಳೆಯನ ನೆರವಿನಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
 
ಪೊಲೀಸರು ಸ್ಥಳೀಯ ಶಸ್ತ್ರಾಸ್ತ್ರ ಡೀಲರ್‌ನನ್ನು ಹಿಂಬಾಲಿಸುತ್ತಿದ್ದರು ಎಂದು ಪೊಲೀಸ್ ಮಹಾನಿರ್ದೇಶಕ ಶಶಿಕಾಂತ್ ಶುಕ್ಲಾ ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಗೌರಿ ಹತ್ಯೆ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಕೇಂದ್ರದ ವಾಗ್ದಾಳಿ