Select Your Language

Notifications

webdunia
webdunia
webdunia
webdunia

ಅನುಮತಿ ನೀಡದ ಪೊಲೀಸರು: ವಿರೋಧದ ನಡುವೆಯೂ ರ್ಯಾಲಿ ಹೊರಟ ಕಾರ್ಯಕರ್ತರು

ಅನುಮತಿ ನೀಡದ ಪೊಲೀಸರು: ವಿರೋಧದ ನಡುವೆಯೂ ರ್ಯಾಲಿ ಹೊರಟ ಕಾರ್ಯಕರ್ತರು
ಹುಬ್ಬಳ್ಳಿ , ಮಂಗಳವಾರ, 5 ಸೆಪ್ಟಂಬರ್ 2017 (14:18 IST)
ಹುಬ್ಬಳ್ಳಿ: ಬಿಜೆಪಿ ಯುವ ಮೋರ್ಚಾ ಕರೆ ನೀಡಿರುವ ಮಂಗಳೂರು ಚಲೋ ರ್ಯಾಲಿಗೆ ಪೊಲೀಸರು ಅನುಮತಿ ನೀಡಿಲ್ಲ. ಈ ವಿರೋಧದ ನಡುವೆಯೂ ನಗರದ ನೆಹರು ಮೈದಾನದಿಂದ ಪೊಲೀಸರ ಬಿಗಿ ಭದ್ರತೆಯ ನಡುವೆಯೇ ಬೈಕ್ ರ್ಯಾಲಿಗೆ ಚಾಲನೆ ಸಿಕ್ಕಿದೆ.

ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್, ಸಂಸದ ಪ್ರಹ್ಲಾದ್ ಜೋಷಿ ಬೈಕ್ ರ್ಯಾಲಿ ಹೊರಟ ಕಾರ್ಯಕರ್ತರಿಗೆ ಹಸಿರು ನಿಶಾನೆ ತೋರಿಸಿದರು. 200ಕ್ಕೂ ಹೆಚ್ಚು ಬೈಕ್ ಗಳಲ್ಲಿ ಬಿಜೆಪಿ ಕಾರ್ಯಕರ್ತರು ತೆರಳಿದರು.
webdunia

ರ್ಯಾಲಿ ಹೊರಟ ಬಿಜೆಪಿ ಕಾರ್ಯಕರ್ತರಿಗೆ ಮಹಿಳೆಯರು ಆರತಿ ಬೆಳಗಿ, ಹಣೆಗೆ ಸಿಂಧೂರವಿಟ್ಟು ಕಾರ್ಯಕರ್ತರಿಗೆ ಶುಭಕೋರಿದರು. ರಾಣಿ ಚೆನ್ನಮ್ಮನಿಗೆ ಮಾಲಾರ್ಪಣೆ ಮಾಡಿ, ಕಾರ್ಯಕರ್ತರು ಅಂಜಟಗೇರಿ ಮಾರ್ಗವಾಗಿ ಮಂಗಳೂರು ಕಡೆ ರ್ಯಾಲಿ ಹೊರಟರು.

Share this Story:

Follow Webdunia kannada

ಮುಂದಿನ ಸುದ್ದಿ

ಪರ್ಯಾಯ ಮಾರ್ಗದ ಮೂಲಕ ಮಂಗಳೂರಿಗೆ ತೆರಳಲು ಬಿಜೆಪಿ ಮುಖಂಡರ ಪ್ಲಾನ್..?