Webdunia - Bharat's app for daily news and videos

Install App

ಪ್ರಿಯಾಂಕಾ ಗಾಂಧಿ ಮಹೋನ್ನತ ನಾಯಕಿ

Webdunia
ಶನಿವಾರ, 28 ಅಕ್ಟೋಬರ್ 2023 (11:08 IST)
ರಾಹುಲ್ ಬದಲು ಪ್ರಿಯಾಂಕಾ ಅವರಿಗೆ ಪಕ್ಷದ ಜವಾಬ್ದಾರಿ ಹೊರಿಸುವಂತೆ ಕಾಂಗ್ರೆಸ್ ಪಕ್ಷದ ಒಳಗಡೆಯೇ ಆಗಾಗ ಒತ್ತಾಯಗಳು ಕೇಳಿ ಬರುತ್ತಿರುತ್ತದೆ. ಅವರು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರನ್ನೇ ಹೋಲುವುದು ಸಹ ಇದಕ್ಕೆ ಕಾರಣವಿರಬಹುದು. ಈಗ ಸ್ವತಃ ಇಂದಿರಾ ಗಾಂಧಿಯವರು ಸಹ ಇದೇ ಬಯಕೆಯನ್ನು ಹೊಂದಿದ್ದರು ಎಂಬ ಸಂಗತಿ ಈಗ ಬೆಳಕಿಗೆ ಬಂದಿದೆ.  ಮೊಮ್ಮಗಳು ಪ್ರಿಯಾಂಕಾ ತಮ್ಮ ಉತ್ತರಾಧಿಕಾರಿಯಾಗಬೇಕೆಂದು ಬಯಸಿದ್ದರು ಎಂದು ಅವರ ವಿಶ್ವಸನೀಯ ಸಲಹೆಗಾರರಾಗಿದ್ದ ಹಿರಿಯ ಕಾಂಗ್ರೆಸಿಗ ಎಂ ಎಲ್‌ ಫೋತೆದಾರ್‌ ಹೇಳಿದ್ದಾರೆ.
 
ಪ್ರಿಯಾಂಕಾರವರಲ್ಲಿ ತಮ್ಮ ಪ್ರತಿಬಿಂಬವನ್ನು ಕಂಡಿದ್ದ ಇಂದಿರಾರವರು ಭವಿಷ್ಯದಲ್ಲಿ ಪ್ರಿಯಾಂಕಾ ಮಹೋನ್ನತ ನಾಯಕಿಯಾಗುತ್ತಾಳೆ ಎಂಬ ಭರವಸೆಯನ್ನು ವ್ಯಕ್ತ ಪಡಿಸಿದ್ದರು ಎಂದು ಪೋತೇದಾರ್ ತಿಳಿಸಿದ್ದಾರೆ. 
 
 ಇಂದಿರಾ ಗಾಂಧಿ ಹತ್ಯೆಯಾಗುವುದಕ್ಕೆ ಕೇವಲ ಮೂರು ದಿನಗಳ ಮೊದಲು. ಆಗ ನಾವು ಕಾಶ್ಮೀರದಲ್ಲಿದ್ದೆವು. ಅಲ್ಲಿ ದೇವಸ್ಥಾನವೊಂದನ್ನು ಸಂದರ್ಶಿಸಿ ದಿಲ್ಲಿಗೆ ಹೊರಡುವ ಮುನ್ನ ನಾವೆಲ್ಲ ಕೊಂಚ ಕಾಲ ಅಲ್ಲೇ ಕುಳಿತುಕೊಂಡು ವಿಶ್ರಾಂತಿ ಪಡೆದುಕೊಂಡೆವು. ಆಗಲೇ ಅವರು ನನ್ನ ಜತೆ ಪ್ರಿಯಾಂಕಾ ಬಗ್ಗೆ ಹೇಳಿಕೊಂಡಿದ್ದರು", ಎಂದು ಫೋತೆದಾರ್‌ ಹೇಳಿದ್ದಾರೆ.
 
"ಬಹುಶಃ ತಮ್ಮ ಸಾವು ಸನ್ನಿಹಿತವಾಗಿದೆ ಎಂದು ಅವರಿಗೆ ಅನ್ನಿಸಿರಬೇಕು, ಹೀಗಾಗಿ ಪ್ರಿಯಾಂಕಾ ನಾಯಕಿಯಾಗಬೇಕೆಂಬ ತಮ್ಮ  ಬಯಕೆಯನ್ನು ಅವರು ಹೇಳಿಕೊಳ್ಳಲು ಬಯಸಿರಬೇಕು. ಅವರ ಮಾತುಗಳು ಬಹಳ ಮಹತ್ವದೆಂದು ನನಗನ್ನಿಸಿತು. ಅವರು ಹೇಳಿದ್ದನ್ನೆಲ್ಲ ಅಂದು ರಾತ್ರಿಯೇ ನಾನು ಬರೆದಿಟ್ಟಿದ್ದೆ", ಎಂದು ಅವರು ಹಳೆಯ ದಿನಗಳನ್ನು ನೆನಪಿಸಿಕೊಂಡಿದ್ದಾರೆ. 
 
ಪ್ರಿಯಾಂಕಾರಲ್ಲಿ ತಮ್ಮನ್ನು ಕಾಣುತ್ತಿದ್ದ ಇಂದಿರಾ ವ್ಯಕ್ತಿತ್ವವನ್ನು ಅಳೆಯುವಲ್ಲಿ ಬಹಳ ಚಾಣಾಕ್ಷರಾಗಿದ್ದರು ಎಂದು ಇಂದಿರಾರವರನ್ನು ಹತ್ತಿರದಿಂದ ಕಂಡ ಅವರ ಆಪ್ತ ಫೋತೆದಾರ್‌  ಹೇಳಿದ್ದಾರೆ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಭಾರೀ ಮಳೆ ಮುನ್ಸೂಚನೆ: ನಾಳೆ ಈ ಭಾಗದ ಶಾಲಾ ಮಕ್ಕಳಿಗೆ ರಜೆ ಘೋಷಣೆ

ಅಯೋಗ್ಯನ ಮಾತು ಕೇಳಿ ಧರ್ಮಸ್ಥಳದ ಪ್ರಕರಣ ಎಸ್‌ಐಟಿಗೆ ವಹಿಸಿದ್ದಾರೆ: ಪ್ರಹ್ಲಾದ ಜೋಶಿ

ರಾಹುಲ್ ಗಾಂಧಿಯಿಂದ ಸಂವಿಧಾನಕ್ಕೆ ಅವಮಾನ: ಪಿನ್ ಟು ಪಿನ್ ಉತ್ತರ ಕೊಟ್ಟ ಚುನಾವಣಾ ಆಯೋಗ

RSS ದೇಶದಲ್ಲಿ ಶಾಂತಿ ಕದಡಲು ಯತ್ನಿಸುತ್ತಿದೆ, ಇದು ಭಾರತದ ತಾಲಿಬಾನ್: ಬಿಕೆ ಹರಿಪ್ರಸಾದ್

ಸಿದ್ದರಾಮಯ್ಯ ಕಮ್ಯೂನಿಸ್ಟ್‌ಗಳಿಗೆ ರೆಡ್ ಕಾರ್ಪೆಟ್ ಹಾಸಿದ್ದೆ ಇದಕ್ಕೆಲ್ಲ ಕಾರಣ: ಆರ್‌ ಅಶೋಕ್‌

ಮುಂದಿನ ಸುದ್ದಿ
Show comments