Publish Date: Thu, 09 Feb 2023 (08:57 IST)
Updated Date: Thu, 09 Feb 2023 (10:59 IST)
ನವದೆಹಲಿ : ಯುಪಿಎ ಆಳ್ವಿಕೆಯ 10 ವರ್ಷದಲ್ಲಿ ಹಣದುಬ್ಬರ ಡಬಲ್ ಡಿಜಿಟ್ನಲ್ಲಿತ್ತು. ದೇಶದ ಸ್ವಾತಂತ್ರ್ಯೋತ್ತರ ಇತಿಹಾಸದಲ್ಲಿಯೇ 2004-2014ರ ಅವಧಿ ಬರೀ ಹಗರಣಗಳಿಂದಲೇ ತುಂಬಿತ್ತು.
ಆ 10 ವರ್ಷಗಳಲ್ಲಿ ದೇಶದ ವಿವಿಧೆಡೆ ಭಯೋತ್ಪಾದಕ ದಾಳಿಗಳು ನಡೆದಿದ್ದವು. ಆದರೆ ನಮ್ಮ ಅವಧಿ ಭಾರತದ ದಶಕವಾಗಿದ್ದು, ಎಲ್ಲಾ ಕ್ಷೇತ್ರಗಳಲ್ಲೂ ಭಾರತ ಈಗ ಬೆಳವಣಿಗೆಯಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮಂಗಳವಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ ಮೇಲೆ ರಾಹುಲ್ ಗಾಂಧಿ ಭಾಷಣ ಮಾಡುವಾಗ ಮೋದಿ-ಅದಾನಿ ಸಂಬಂಧವನ್ನು ಪ್ರಶ್ನಿಸಿ ಹಲವು ಪ್ರಶ್ನೆ ಕೇಳಿದ್ದರು. ಇದಕ್ಕೆ ನಿರೀಕ್ಷೆಯಂತೆಯೇ ಪ್ರಧಾನಿ ಮೋದಿ ಸಂಸತ್ ಸಾಕ್ಷಿಯಾಗಿ, ವ್ಯಂಗ್ಯಭರಿತವಾಗಿ ತಿರುಗೇಟು ನೀಡಿದ್ದಾರೆ.