Publish Date: Tue, 07 Feb 2023 (12:41 IST)
Updated Date: Tue, 07 Feb 2023 (11:15 IST)
ಬೆಂಗಳೂರು : ಅತ್ಯಂತ ವೇಗದಲ್ಲಿ ಬೆಳೆಯುತ್ತಿರುವ ಆರ್ಥಿಕತೆ ಭಾರತದ್ದಾಗಿದೆ. ಹೊರಗಿನ ಪರಿಸ್ಥಿತಿಗಳು ಏನೇ ಇರಲಿ, ಆಂತರಿಕವಾಗಿ ಭಾರತ ಗಟ್ಟಿಯಾಗಿದೆ.
ಸದೃಢ ಸರ್ಕಾರ, ನಿರಂತರ ಪರಿವರ್ತನೆ, ತಳಮಟ್ಟದಲ್ಲಿ ಸಾಮಾಜಿಕ ಆರ್ಥಿಕ ಪ್ರಾಬಲ್ಯ ಭಾರತವನ್ನು ಗಟ್ಟಿಯಾಗಿ ಇಟ್ಟಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ನೆಲಮಂಗಲ ಹತ್ತಿರದ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಭಾರತ ಇಂಧನ ಸಪ್ತಾಹ 2023ಕ್ಕೆ ಚಾಲನೆ ನೀಡಿ ಬಳಿಕ ಮಾತನಾಡುತ್ತಾ, ಈಗ ಟರ್ಕಿಯಲ್ಲಿ ಭೂಕಂಪದಿಂದ ಸಾಕಷ್ಟು ನೋವಾಗಿದೆ.
ಸಾಕಷ್ಟು ಮಂದಿ ಸಾವನ್ನಪ್ಪಿದ್ದಾರೆ. ಅವರೊಂದಿಗೆ ಎಲ್ಲ ಭಾರತೀಯರು ಜೊತೆಗಿದ್ದೇವೆ ಎಂದು ಹೇಳಿದರು.