Select Your Language

Notifications

webdunia
webdunia
webdunia
webdunia

ಹಳೆ ದ್ವೇಷ ಎಂದು ಛೀ... ಈ ರೀತಿ ಮಾಡೋದ!?

ಹಳೆ ದ್ವೇಷ ಎಂದು ಛೀ... ಈ ರೀತಿ ಮಾಡೋದ!?
ಜೈಪುರ , ಸೋಮವಾರ, 31 ಜನವರಿ 2022 (06:45 IST)
ಜೈಪುರ : ಹಳೆ ದ್ವೇಷದ ಹಿನ್ನೆಲೆ ದಲಿತ ಯುವಕನನ್ನು ಅಪಹರಿಸಿ ಹಲ್ಲೆ ಮಾಡಿ, ಆತನಿಗೆ ಮೂತ್ರ ಕುಡಿಸಿರುವ ಘಟನೆ ಚೂರು ಜಿಲ್ಲೆಯಲ್ಲಿ ನಡೆದಿದೆ.

ಉಮೆಶ್, ಬೀರ್ಬಲ್ ಬಂಧಿತ ಆರೋಪಿಗಳಾಗಿದ್ದಾರೆ. ರುಖಾಸರ್ ಗ್ರಾಮದ ನಿವಾಸಿ  ರಾಕೇಶ್ ಮೇಘವಾಲ್ ಸಂತ್ರಸ್ತ ಯುವಕನಾಗಿದ್ದಾನೆ. 

ಸಂತ್ರಸ್ತ ರಾಕೇಶ್ ಮೇಘವಾಲ್ ನೀಡಿದ ಪೊಲೀಸ್ ದೂರಿನ ಪ್ರಕಾರ, ಆರೋಪಿಗಳು ರಾತ್ರಿ 11 ಗಂಟೆಯ ಸುಮಾರಿಗೆ ಮನೆಯಿಂದ ಅಪಹರಿಸಿ ಹೊಲಕ್ಕೆ ಕರೆದೊಯ್ದಿದ್ದರು. ಬಲವಂತವಾಗಿ ಮದ್ಯ ಕುಡಿಸಿ ನಂತರ ಅದೇ ಬಾಟಲಿಯಲ್ಲಿ ಮೂತ್ರ ವಿಸರ್ಜನೆ ಮಾಡಿ ನನಗೆ ಕುಡಿಸಿದ್ದಾರೆ.

ಆರೋಪಿಗಳು ಜಾತಿ ನಿಂದನೆ ಮತ್ತು ಇತರ ಅವಹೇಳನಕಾರಿ ಪದಗಳನ್ನು ಬಳಸಿದ್ದಾರೆ ಎಂದು ಮೇಘವಾಲ್ ರತನ್ಗಢ ಪೊಲೀಸ್ ಠಾಣೆಯಲ್ಲಿ ದೂರಿನಲ್ಲಿ ಆರೋಪಿಸಿದ್ದಾರೆ.

ಜನವರಿ 27ರಂದು ಗ್ರಾಮದ ಮೇಲ್ವರ್ಗದ 8 ಜನ ಕ್ಷುಲ್ಲಕ ಕಾಣರಣಕ್ಕೆ ಹಲ್ಲೆಮಾಡಿದ್ದಾರೆ. 8 ಜನಗಳ ಗುಂಪು ಈ ಕೃತ್ಯ ಎಸಗಿದ್ದಾರೆ. ಮೇಘವಾಲ್ ಅವರ ಬೆನ್ನಿನ ಮೇಲಿನ ಗಾಯದ ಗುರುತುಗಳಾಗಿವೆ.


Share this Story:

Follow Webdunia kannada

ಮುಂದಿನ ಸುದ್ದಿ

ಪ್ರಧಾನಮಂತ್ರಿಯವರ 15 ಅಂಶಗಳ ಕಾರ್ಯಕ್ರಮ ಪ್ರಗತಿಗೆ ಸೂಚನೆ