Select Your Language

Notifications

webdunia
webdunia
webdunia
webdunia

ಗೋವು ಮಾತೆ ಅಲ್ಲ, ಗೋಮಾಂಸ ಸೇವನೆ ತಪ್ಪಲ್ಲ!

ಗೋವು ಮಾತೆ ಅಲ್ಲ, ಗೋಮಾಂಸ ಸೇವನೆ ತಪ್ಪಲ್ಲ!
ಭೋಪಾಲ್ , ಭಾನುವಾರ, 26 ಡಿಸೆಂಬರ್ 2021 (10:54 IST)
ಭೋಪಾಲ್ : ಗೋವು ನಮ್ಮ ತಾಯಿ ಅಲ್ಲ, ಗೋಮಾಂಸ ಸೇವನೆ ಮಾಡುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಸಾರ್ವಕರ್ ಅವರೇ ತಮ್ಮ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ ಎಂದು ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಹೇಳಿದ್ದಾರೆ.

ಭೋಪಾಲ್ನಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾಂಗ್ರೆಸ್ ಜನಜಾಗೃತಿ ಅಭಿಯಾನದಲ್ಲಿ ಮಾತನಾಡಿದ ಅವರು, ಹಿಂದುತ್ವ ಮತ್ತು ಹಿಂದೂ ಧರ್ಮಕ್ಕೆ ಯಾವುದೇ ಸಂಬಂಧವಿಲ್ಲ. ಗೋವು ನಮ್ಮ ಮಾತೆಯಲ್ಲ. ಗೋಮಾಂಸ ತಿನ್ನುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ವೀರ್ ಸಾರ್ವಕರ್ ಅವರ ಪುಸ್ತಕದಲ್ಲಿ ಬರೆದಿದ್ದಾರೆ ಎಂದಿದ್ದಾರೆ.

ದಿಗ್ವಿಜಯ್ ಸಿಂಗ್ ಹೇಳಿಕೆ ಕುರಿತಂತೆ ಬಿಜೆಪಿ ಶಾಸಕ ರಾಮೇಶ್ವರ ಶರ್ಮಾ ಪ್ರತಿಕ್ರಿಯಿಸಿದ್ದು, ಕಾಂಗ್ರೆಸ್ ನಾಯಕರು ಯಾವಾಗಲೂ ಹಿಂದೂಗಳಿಗೆ ಮಾನಹಾನಿ ಮಾಡುವುದರಲ್ಲಿ ನಿರತರಾಗಿದ್ದಾರೆ.

ಹಿಂದೂಗಳ ವಿರುದ್ಧ ಷಡ್ಯಂತ್ರ ಮಾಡಲು ಹಗಲಿರುಳು ಶ್ರಮಿಸುತ್ತಿರುವ ದಿಗ್ವಿಜಯ್ ಸಿಂಗ್ ಅವರೇ ಹಿಂದೂಗಳು ಮತ್ತು ಹಿಂದೂಸ್ತಾನದ ಅಭ್ಯುದಯಕ್ಕಾಗಿ ನೀವು ಶ್ರಮಿಸಿದ್ದರೆ, ಪಾಕಿಸ್ತಾನದಲ್ಲಿ ಜಿನ್ನಾ ಹುಟ್ಟುತ್ತಿರಲಿಲ್ಲ. ಭಯೋತ್ಪಾದನೆಯೂ ಇರುತ್ತಿರಲಿಲ್ಲ ಎಂದು ಕಿಡಿಕಾರಿದ್ದಾರೆ. 


Share this Story:

Follow Webdunia kannada

ಮುಂದಿನ ಸುದ್ದಿ

ಸೇನಾ ದಾಳಿ : 30 ಮಂದಿ ದುರ್ಮರಣ!