ಉಪವಾಸ ಅಂತ್ಯಗೊಳಿಸಲು ನೀರು ಕೇಳಿದ ಮುಸ್ಲಿಂ ಪ್ರಯಾಣಿಕನಿಗೆ ತಿಂಡಿಕೊಟ್ಟ ಗಗನಸಖಿ

Webdunia
ಸೋಮವಾರ, 20 ಮೇ 2019 (17:37 IST)
ಸಾಂಸ್ಕೃತಿಕ ಮತ್ತು ಧಾರ್ಮಿಕ ಭಿನ್ನಾಭಿಪ್ರಾಯಗಳಿಲ್ಲದ ಪರಸ್ಪರರ ಗೌರವ ನಮ್ಮ ದೇಶವನ್ನು ವ್ಯಾಖ್ಯಾನಿಸುತ್ತದೆ. ಈ ಘಟನೆಯು ನಿಮ್ಮ ನಂಬಿಕೆಯನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ.
ನವದೆಹಲಿಯಿಂದ ಗೋರಖ್‌ಪುರ್‌ಗೆ ತೆರಳುವ ಏರಿಂಡಿಯಾ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಮುಸ್ಲಿಂ ಪ್ರಯಾಣಿಕ ರಿಫಾತ್ ಜವೈದ್‌, ರಂಜಾನ್‌ನಿಮಿತ್ಯ ಉಪವಾಸ ವ್ರತವನ್ನು ಆಚರಿಸುತ್ತಿದ್ದ. ಅಲ್ಲಿಗೆ ಬಂದ ಮಂಜುಳಾ ಎನ್ನುವ ಗಗನಸಖಿಗೆ ವ್ರತ ಅಂತ್ಯಗೊಳಿಸಲು ನೀರಿನ ಬಾಟಲ್‌ ಕೊಡುವಂತೆ ಕೇಳಿದ್ದಾನೆ.
 
ಗಗನಸಖಿ ಒಂದು ನೀರಿನ ಬಾಟಲ್‌ ಕೊಟ್ಟ ನಂತರ ರಿಫಾದ್ ಮತ್ತೊಂದು ಬಾಟಲ್‌ಗಾಗಿ ಕೋರಿಕೆ ಸಲ್ಲಿಸಿದ್ದಾನೆ. ಕೂಡಲೇ ತನ್ನ ಸೀಟಿಗೆ ತೆರಳುವಂತೆ ರಿಫಾದ್‌ಗೆ ಸೂಚಿಸಿದ ಗಗನಸಖಿ, ಕೆಲ ನಿಮಿಷಗಳಲ್ಲಿ ಮರಳಿ ಬಂದು ಎರಡು ಸ್ಯಾಂಡ್‌ವಿಚ್‌ಗಳಿರುವ ಆಹಾರ ಕೊಟ್ಟು ಇನ್ನೂ ಬೇಕಾದ್ರೆ ಕೇಳಿ ಎಂದು ಮನವಿ ಮಾಡಿದ್ದಾಳೆ.
 
ಗಗನಸಖಿಯ ಮಾತುಗಳನ್ನು ಕೇಳಿ ಆಕೆಯ ಹೃದಯ ವೈಶಾಲ್ಯತೆಯನ್ನು ಕಂಡು ಮನದುಂಬಿ ಬಂತು. ನನಗೆ ಹೆಚ್ಚಿನ ಸ್ಯಾಂಡ್‌ವಿಚ್ ಬೇಕಾಗಿರಲಿಲ್ಲ. ಇಷ್ಟೇ ನನಗೆ ಸಾಕಾಗಿತ್ತು. ಇದು ನಮ್ಮ ಭಾರತ ಎಂದು ರಿಫಾದ್ ತಮ್ಮ ಘಟನೆಯನ್ನು ಸಾಮಾಜಿಕ ಜಾಲ ತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
 
ಸಾಮಾಜಿಕ ಜಾಲ ತಾಣದಲ್ಲಿ ಸುದ್ದಿ ಬಿತ್ತರವಾಗುತ್ತಿದ್ದಂತೆ ವೈರಲ್‌ ಆಗಿದ್ದು, ಗಗನಸಖಿ ಮಂಜುಳಾ ಹೃದಯ ವೈಶಾಲ್ಯತೆಯ ಬಗ್ಗೆ ಗುಣಗಾನ ಮಾಡಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಅನ್ನದಾತರ ಜೊತೆ ಜನ್ಮದಿನ ಯಾವತ್ತೂ ಮರೆಯಲಾರೆ: ವಿಜಯೇಂದ್ರ

ತಮ್ಮ ಪಕ್ಷದಲ್ಲೇ ಬೇರೆಯವರಿಗೆ ಅವಕಾಶ ಕೊಡದ ಗಾಂಧಿ ಕುಟುಂಬದವರು ಸೇನೆ ಬಗ್ಗೆ ಮಾತನಾಡ್ತಾರೆ: ಬಿಜೆಪಿ ವ್ಯಂಗ್ಯ

ಕರ್ನಾಟಕ ಎಸ್ಎಸ್ಎಲ್ ಸಿ, ದ್ವಿತೀಯ ಪಿಯುಸಿ ಪರೀಕ್ಷೆ ವೇಳಾಪಟ್ಟಿ ಇಲ್ಲಿದೆ ನೋಡಿ

ದೇವರು ಕೊಟ್ರೂ ಪೂಜಾರಿ ಕೊಡಲಿಲ್ಲ: ಕೇಂದ್ರ ಜಿಎಸ್ ಟಿ ಇಳಿಸಿದ್ದರೆ ನಂದಿನಿ ತುಪ್ಪದ ಬೆಲೆ ಏರಿಸಿದ ಕೆಎಂಎಫ್

ಬ್ರೆಜಿಲ್ ಮಾಡೆಲ್ ಹರ್ಯಾಣದಲ್ಲಿ 22 ಬಾರಿ ವೋಟ್: ರಾಹುಲ್ ಗಾಂಧಿಯಿಂದ ಮತ್ತೊಂದು ಬಾಂಬ್

ಮುಂದಿನ ಸುದ್ದಿ
Show comments