Select Your Language

Notifications

webdunia
webdunia
webdunia
webdunia

ಮುಂಬೈ: ಪ್ರಸಾದ ಸೇವಿಸಿದ 90ಕ್ಕೂ ಅಧಿಕ ಮಂದಿಗೆ ವಾಂತಿ, ಆಸ್ಪತ್ರೆಗೆ ದಾಖಲು

Food Poision

Sampriya

ಮುಂಬೈ , ಗುರುವಾರ, 16 ಮೇ 2024 (16:20 IST)
ಮುಂಬೈ: ದೇವಸ್ಥಾನದ ಉತ್ಸವ ಸಂದರ್ಭದಲ್ಲಿ ಪ್ರಸಾದ ಸೇವಿಸಿದ ಕನಿಷ್ಠ 90 ಮಂದಿ ಅಸ್ವಸ್ಥಗೊಂಡಿರುವ ಘಟನೆ ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯಲ್ಲಿ ನಡೆದಿದೆ.

ಸದ್ಯ ಅಸ್ವಸ್ಥರನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.

ಈ ಬಗ್ಗೆ ಅಧಿಕಾರಿಯೊಬ್ಬರು ಮಾಹಿತಿ ನೀಡಿ, ನಾಯ್‌ಗಾಂವ್‌ನಲ್ಲಿ ಬುಧವಾರ ಶಿವ ದೇಗುಲದಲ್ಲಿ ಉತ್ಸವವೊಂದನ್ನು ಆಯೋಜಿಸಲಾಗಿತ್ತು. ಬಳಿಕ ಭಕ್ತರಿಗೆ 'ಅಂಬಿಲ್' (ಗಂಜಿ) ಮತ್ತು 'ಖೀರ್' (ಹಾಲಿನಿಂದ ಮಾಡಿದ ಸಿಹಿ ಭಕ್ಷ್ಯ) ನೀಡಲಾಗಿತ್ತು.

ಇನ್ನೂ ಪ್ರದಾದ ಸೇವನೆ ನಂತರ  ಕೆಲ ಭಕ್ತರಿಗೆ ತಲೆಸುತ್ತು ಹಾಗೂ ವಾಂತಿ ಸಮಸ್ಯೆ ಕಾಣಿಸಿಕೊಂಡಿತು. ಆರಂಭದಲ್ಲಿ ಕೆಲವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಬಳಿಕ ತಡರಾತ್ರಿಯವರೆಗೆ ಒಟ್ಟು 90 ಜನರನ್ನು ಚಿಕಿತ್ಸೆಗಾಗಿ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ಅವರು ಹೇಳಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಕಾಂಗ್ರೆಸ್ ಅಭ್ಯರ್ಥಿಯಿಂದ ಮತದಾರರಿಗೆ ಗಿಫ್ಟ್- ಬಿಜೆಪಿ ದೂರು