Webdunia - Bharat's app for daily news and videos

Install App

ತಲೆ ಕೂದಲು ಕಟ್ ಮಾಡ್ಸು ಎಂದ ಪ್ರೊಫೆಸರ್ ಗೆ ಚೂರಿಯಿಂದ ಇರಿದ ವಿದ್ಯಾರ್ಥಿ

Webdunia
ಶನಿವಾರ, 7 ಅಕ್ಟೋಬರ್ 2017 (19:17 IST)
ಮುಂಬೈ: ತಲೆ ಕೂದಲು ಕಟ್ ಮಾಡುವ ವಿಚಾರವಾಗಿ ಬುದ್ಧಿ ಹೇಳಿದಕ್ಕೆ ಕೋಪಗೊಂಡ ವಿದ್ಯಾರ್ಥಿ ಇಬ್ಬರು ಪ್ರೊಫೆಸರ್ ಗಳ ಮೇಲೆ ಚಾಕುವಿನಿಂದ ಹಲ್ಲೆ ಮಾಡಿರುವ ಘಟನೆ ಜೋಗೇಶ್ವರಿ ಮಾತಾ ಸೆಕೆಂಡರಿ ಮತ್ತು ಜೂನಿಯರ್ ಕಾಲೇಜಿನಲ್ಲಿ ನಡೆದಿದೆ.
ಹಲ್ಲೆ ಮಾಡಿದ ವಿದ್ಯಾರ್ಥಿ ಸುನಿಲ್ ಭೋರ್

ಪ್ರೊಫೆಸರ್ ಗಳಾದ ಧನಂಜಯ್ ಅಬ್ನಾವೆ ಮತ್ತು ದರ್ಶನ್ ಚೌಧರಿ ಹಲ್ಲೆಗೊಳಗಾಗಿದ್ದು, ವಘೋಲಿಯಲ್ಲಿರುವ ಐಮ್ಯಾಕ್ಸ್ ಆಸ್ಪತ್ರೆಯಲ್ಲಿ ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಲ್ಲೆ ಮಾಡಿದ ವಿದ್ಯಾರ್ಥಿ ಸುನಿಲ್ ಭೋರ್ ತಲೆ ಮರೆಸಿಕೊಂಡಿದ್ದಾನೆ.

ನಿನ್ನೆ ಕಾಲೇಜಿನಲ್ಲಿ ತರಗತಿ ನಡೆಯುವ ಸಂದರ್ಭದಲ್ಲಿ ಪ್ರೊ.ಧನಂಜಯ್, ತಲೆ ಕೂದಲನ್ನು ಸರಿಯಾಗಿ ಕಟ್ ಮಾಡಿಸು. ಕ್ಲಾಸ್ ನಲ್ಲಿ ಟೋಪಿ ಹಾಕಬೇಡ. ಶಿಸ್ತಿನಿಂದ ವರ್ತಿಸು ಎಂದು ಸುನಿಲ್ ಗೆ ಹೇಳಿದ್ದಾರೆ. ಇದರಿಂದ ಉದ್ರಿಕ್ತಗೊಂಡ ಸುನಿಲ್, ಧನಂಜಯ್ ಗೆ ಚಾಕುವಿನಿಂದ ಇರಿದಿದ್ದಾನೆ. ಧನಂಜಯ್ ಗೆ ತಲೆ, ಕುತ್ತಿಗೆ, ಕೈಗಳು,  ಹಾಗೂ ಹೊಟ್ಟೆ ಭಾಗದಲ್ಲಿ ಗಾಯಗಳಾಗಿವೆ. ಇದನ್ನು ಕಂಡು ಬಿಡಿಸಲು ಹೋದ ದರ್ಶನ್ ಮೇಲೂ ಅಟ್ಯಾಕ್ ಮಾಡಿದ್ದು, ಹಣೆ ಮತ್ತು ಕೈಗಳಿಗೆ ಗಾಯವಾಗಿದೆ.

ಸುನಿಲ್ ಭೋರ್ ಈ ಹಿಂದೆಯೂ ಅಶಿಸ್ತಿನಿಂದ ವರ್ತಿಸಿದ್ದು, ಕಾಲೇಜಿನಿಂದ ದೂರು ಬಂದಿತ್ತು. ಆದರೆ ಅದನ್ನು ಗಂಭೀರವಾಗಿ ತೆಗೆದುಕೊಳ್ಳದ ಕಾರಣ ಈ ಘಟನೆ ನಡೆದಿದೆ ಎಂದು ಆರೋಪಿ ಸುನಿಲ್ ತಂದೆ ಹೇಳಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಲೋನಿಖಂಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತಲೆ ಮರೆಸಿಕೊಂಡಿರುವ ಆರೋಪಿ ಸುನಿಲ್ ಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments