Select Your Language

Notifications

webdunia
webdunia
webdunia
webdunia

ಮುಂಬೈ ಕಾಲ್ತುಳಿತದಲ್ಲಿ ದ.ಕನ್ನಡ ಜಿಲ್ಲೆಯ ಇಬ್ಬರ ಸಾವು

ಮುಂಬೈ ಕಾಲ್ತುಳಿತದಲ್ಲಿ ದ.ಕನ್ನಡ ಜಿಲ್ಲೆಯ ಇಬ್ಬರ ಸಾವು
ಮುಂಬೈ , ಶನಿವಾರ, 30 ಸೆಪ್ಟಂಬರ್ 2017 (11:31 IST)
ಮುಂಬೈ: ಮುಂಬೈಯ ಪರೇಲ್ ಎಲ್ಫಿಲ್ಟನ್ ರೈಲ್ವೇ ನಿಲ್ದಾಣದ ಮೇಲ್ಸೇತುವೆಯಲ್ಲಿ ಉಂಟಾದ ನೂಕುನುಗ್ಗಲಿನಲ್ಲಿ ಕಾಲ್ತುಳಿತದಿಂದಾಗಿ ಸಾವನ್ನಪ್ಪಿದವರ ಪೈಕಿ ದ.ಕನ್ನಡ ಜಿಲ್ಲೆಯ ಇಬ್ಬರು ಮಹಿಳೆಯರೂ ಸೇರಿದ್ದಾರೆ.


ಇವರು ಮುಂಬೈ ಬಂಟ್ಸ್ ಸಂಘದ ಪ್ರಾದೇಶಿಕ ಸಮಿತಿ ಸದಸ್ಯರು. ಮೃತರನ್ನು ಸುಜಾತಾ ಪಿ ಆಳ್ವ (42) ಮತ್ತು ಸುಮಲತಾ ಸಿ ಶೆಟ್ಟಿ (45) ಎಂದು ಗುರುತಿಸಲಾಗಿದೆ.

ಇವರಿಬ್ಬರೂ ಕಾಂಜೂರ್ಮಾರ್ಗ ಪೂರ್ವದ ನೆಹರೂ ನಗರ ನಿವಾಸಿಗಳಾಗಿದ್ದರು. ದಸರಾ ಹಬ್ಬದ ಪೂಜೆಗೆಂದು ಹೂವು ಖರೀದಿಸಲು ಹೋಗಿದ್ದಾಗ ಈ ದುರಂತಕ್ಕೆ ಬಲಿಯಾಗಿದ್ದಾರೆ ಎನ್ನಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

‘ಗೋ ರಕ್ಷಣೆಗಾಗಿ ಎಷ್ಟೋ ಮುಸ್ಲಿಮರು ಪ್ರಾಣ ತ್ಯಾಗ ಮಾಡಿದ್ದಾರೆ’