Publish Date: Wed, 15 Jul 2026 (14:47 IST)
Updated Date: Wed, 15 Jul 2026 (14:52 IST)
ಮಕ್ಕಳಿಗೆ ತಾಯಿಯೇ ಮೊದಲ ದೈವ ಎನ್ನಲಾಗುತ್ತದೆ. ಆದರೆ, ಹೆತ್ತ ತಾಯಿಯೇ ತನ್ನ ಇಬ್ಬರು ಪುಟ್ಟ ನಿಷ್ಕಪಟ ಮಕ್ಕಳ ಕಾಲುಗಳಿಗೆ ಸರಪಳಿ ಕಟ್ಟಿ, ಬಾಯಿಗೆ ಬಟ್ಟೆ ತುರುಕಿ ಕೆಲಸಕ್ಕೆ ಹೋಗಿರುವ ಅತ್ಯಂತ ಪಾಷಾಣ ಹಾಗೂ ಹೃದಯವಿದ್ರಾವಕ ಘಟನೆಯೊಂದು ಬೆಳಕಿಗೆ ಬಂದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ಸುದ್ದಿ ಮತ್ತು ದೃಶ್ಯಗಳು ಕಲ್ಲಿನಂತಹ ಮನಸ್ಸನ್ನೂ ಕರಗಿಸುವಂತಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಘಾತ ಸೃಷ್ಟಿಸಿದೆ.
ಸರಪಳಿಯಲ್ಲಿ ಬಂಧಿಯಾದ ಬಾಲ್ಯ: ಇನ್ನೂ ಸರಿಯಾಗಿ ಲೋಕ ಜ್ಞಾನವೇ ತಿಳಿಯದ ಅತ್ಯಂತ ಪುಟ್ಟ ಪ್ರಾಯದ ಇಬ್ಬರು ಮಕ್ಕಳ ಕಾಲುಗಳಿಗೆ ಕಬ್ಬಿಣದ ಸರಪಳಿಗಳನ್ನು ಹಾಕಿ ಬೀಗ ಜಡಿಯಲಾಗಿದೆ. ಅಷ್ಟೇ ಅಲ್ಲದೆ, ಮಕ್ಕಳು ಜೋರಾಗಿ ಅತ್ತು ಆಜುಬಾಜಿನವರಿಗೆ ಕೇಳಿಸದಿರಲಿ ಎಂಬ ಕ್ರೂರ ಆಲೋಚನೆಯಿಂದ ಅವರ ಬಾಯಿಗೂ ಬಟ್ಟೆಯನ್ನು ಕಟ್ಟಲಾಗಿದೆ.
ನೆರೆಹೊರೆಯವರನ್ನು ತಲ್ಲಣಗೊಳಿಸಿದ ರೋದನ: ತಾಯಿಯ ಈ ಅಮಾನವೀಯ ಕೃತ್ಯದಿಂದಾಗಿ ಮನೆಯೊಳಗೆ ಕೂಡಿಹಾಕಲ್ಪಟ್ಟ ಮಕ್ಕಳು ನೋವು ಮತ್ತು ಭಯದಿಂದ ಜೋರಾಗಿ ರೋದಿಸುತ್ತಿದ್ದು, ಆ ಪುಟ್ಟ ಕಂದಮ್ಮಗಳ ಕರುಣಾಜನಕ ಆಕ್ರಂದನದ ಧ್ವನಿ ಕೇಳುಗರ ಹೃದಯವನ್ನೇ ಸೀಳುವಂತಿದೆ. ಮಕ್ಕಳ ಅಳುವಿನ ಶಬ್ದ ಕೇಳಿ ಧಾವಿಸಿದ ಸ್ಥಳೀಯರು ಈ ಭೀಕರ ದೃಶ್ಯವನ್ನು ಕಂಡು ಬೆಚ್ಚಿಬಿದ್ದಿದ್ದಾರೆ.
ಈ ಘಟನೆಯು ಸಾರ್ವಜನಿಕರಲ್ಲಿ ತೀವ್ರ ಆಕ್ರೋಶದ ಜೊತೆಗೆ ಹಲವು ಪ್ರಶ್ನೆಗಳನ್ನು ಮೂಡಿಸಿದೆ. ಎಂತಹ ಪರಿಸ್ಥಿತಿಯೇ ಇದ್ದರೂ, ಹೆತ್ತ ಕರುಳಿನ ಮೇಲೆ ಇಷ್ಟೊಂದು ನಿರ್ದಯ ಹಾಗೂ ಪಾಷಾಣ ಮನಸ್ಸಿನಿಂದ ದೌರ್ಜನ್ಯ ಎಸಗಲು ಒಬ್ಬ ತಾಯಿಗೆ ಹೇಗೆ ಸಾಧ್ಯ ಎಂಬ ಆಕ್ರೋಶದ ಮಾತುಗಳು ಕೇಳಿಬರುತ್ತಿವೆ. ಇದು ತಾಯಿತನಕ್ಕೇ ಕಳಂಕ ತರುವಂತಹ ಕೃತ್ಯ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಸದ್ಯ ಮಕ್ಕಳನ್ನು ಇಂತಹ ನರಕಯಾತನೆಯಿಂದ ಮುಕ್ತಗೊಳಿಸಲು ಸ್ಥಳೀಯರು ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಧಾವಿಸಿದ್ದು, ಮಕ್ಕಳ ರಕ್ಷಣೆಗೆ ಮುಂದಾಗಿದ್ದಾರೆ. ಇಂತಹ ಕ್ರೂರ ಕೃತ್ಯ ಎಸಗಿದ ಮಹಿಳೆಯ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ