Select Your Language

Notifications

webdunia
webdunia
webdunia
webdunia

ಆರೋಗ್ಯ ಸಚಿವೆಯ ಆಪ್ತ ಎಂದು ನಿರುದ್ಯೋಗಿಗಳಿಗೆ ವಂಚನೆ: ಆರೋಪಿ ಬಂಧನ

ಆರೋಗ್ಯ ಸಚಿವೆಯ ಆಪ್ತ ಎಂದು ನಿರುದ್ಯೋಗಿಗಳಿಗೆ ವಂಚನೆ: ಆರೋಪಿ ಬಂಧನ
ಕೊಚ್ಚಿ , ಗುರುವಾರ, 3 ಮಾರ್ಚ್ 2022 (11:46 IST)
ಕೊಚ್ಚಿ: ತಾನು ಕೇರಳ ಆರೋಗ್ಯ ಸಚಿವರ ಆಪ್ತ ಎಂದು ನಿರುದ್ಯೋಗಿಗಳಿಗೆ ವಂಚನೆ ಮಾಡುತ್ತಿದ್ದ 45 ವರ್ಷದ ವ್ಯಕ್ತಿಯನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ.

ಪಟ್ಟಣತಿಟ್ಟಂ ಜಿಲ್ಲೆಯ ಆರೋಪಿ ಸನೋಜ್ ಎಂಬಾತ ತನಗೆ ಆರೋಗ್ಯ ಸಚಿವರ ಪರಿಚಯವಿದೆ. ನಿಮಗೆ ಸರ್ಕಾರಿ ಕೆಲಸ ಕೊಡಿಸುವುದಾಗಿ ಹೆಲ್ತ್ ಸೆಂಟರ್ ಒಂದರಲ್ಲಿ ಕೂತು ಉದ್ಯೋಗಾಕಾಂಕ್ಷಿಗಳಿಂದ ಅರ್ಜಿ ಸ್ವೀಕರಿಸುತ್ತಿದ್ದ. ಈತನನ್ನು ನಂಬಿ ಹಲವರು ಮೋಸ ಹೋಗಿದ್ದರು.

ಇದೀಗ ಈತನ ವಂಚನೆ ಬಯಲಿಗೆ ಬಂದಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಈ ಬಗ್ಗೆ ಹೆಲ್ತ್ ಸೆಂಟರ್ ನೌಕರರು ಆರೋಗ್ಯ ಸಚಿವರಿಗೆ ದೂರು ನೀಡಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಪರೀಕ್ಷಾ ವೇಳಾಪಟ್ಟಿ ಬದಲಾವಣೆ?