Publish Date: Sat, 27 Mar 2021 (10:01 IST)
Updated Date: Sat, 27 Mar 2021 (10:04 IST)
ಕೋಲ್ಕೊತ್ತಾ: ಪಶ್ಚಿಮ ಬಂಗಾಲದಲ್ಲಿ ಚುನಾವಣೆ ಪ್ರಚಾರ ಕಾವೇರುತ್ತಿದ್ದು ಸಿಎಂ ಮಮತಾ ಬ್ಯಾನರ್ಜಿ ಪ್ರಧಾನಿ ಮೋದಿ, ಅಮಿತ್ ಶಾ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಅದರಲ್ಲೂ ನಿನ್ನೆಯ ಪ್ರಚಾರದಲ್ಲಂತೂ ಮಮತಾ ಅಮಿತ್ ಶಾರನ್ನು ರಾಕ್ಷಸ ಎಂದು ಕರೆದರೆ ಪ್ರಧಾನಿ ಮೋದಿಯ ಉದ್ದನೆಯ ದಾಡಿಯ ಬಗ್ಗೆಯೂ ಕಾಮೆಂಟ್ ಮಾಡಿದ್ದಾರೆ.
ಮೋದಿ ತಮ್ಮನ್ನು ತಾವು ಸ್ವಾಮಿ ವಿವೇಕಾನಂದ ಎನ್ನುತ್ತಾರೆ. ಬಳಿಕ ತಮ್ಮ ಹೆಸರನ್ನು ಮೈದಾನಕ್ಕೆ ಇಟ್ಟುಕೊಳ್ಳುತ್ತಾರೆ. ಅವರ ತಲೆಯ ಸ್ಕ್ರೂ ಲೂಸ್ ಆಗಿರಬೇಕು. ಅವರ ದಾಡಿ ದಿನೇ ದಿನೇ ಬೆಳೆಯುತ್ತಿದೆಯೇ ಹೊರತು, ಉದ್ಯಮಗಳು ಬೆಳೆಯುತ್ತಿಲ್ಲ. ಇನ್ನು ಅಮಿತ್ ಶಾ ಒಬ್ಬ ರಾಕ್ಷಸ ಎಂದು ದೀದಿ ವಾಗ್ಧಾಳಿ ನಡೆಸಿದ್ದಾರೆ.