Select Your Language

Notifications

webdunia
webdunia
webdunia
webdunia

ಮಮತಾ ಬ್ಯಾನರ್ಜಿ ಹತ್ಯೆಗೈಯಲು ಪತ್ರದ ಮೂಲಕ 1 ಕೋಟಿ ರೂ ಆಫರ್

ಮಮತಾ ಬ್ಯಾನರ್ಜಿ ಹತ್ಯೆಗೈಯಲು ಪತ್ರದ ಮೂಲಕ  1 ಕೋಟಿ ರೂ ಆಫರ್
ಕೋಲ್ಕತ್ತಾ , ಸೋಮವಾರ, 10 ಜೂನ್ 2019 (12:28 IST)
ಕೋಲ್ಕತ್ತಾ: ಪಶ್ಚಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಅವರನ್ನು ಹತ್ಯೆಗೈಯಲು ಆಫರ್ ನೀಡಿ ಪತ್ರವೊಂದು ತೃಣಮೂಲ ಕಾಂಗ್ರೆಸ್ ಸಂಸದರಿಗೆ ಬಂದಿರುವುದಾಗಿ ಮಾಹಿತಿ ತಿಳಿದುಬಂದಿದೆ.




ಆರಾಂಭಾಗ್ ಸಂಸದೆ ಅಪರೂಪ ಅವರ ವಿಳಾಸಕ್ಕೆ ಭಾನುವಾರ ಈ ಪತ್ರ ಬಂದಿದ್ದು, ಅದರಲ್ಲಿ ಮಮತಾ ಬ್ಯಾನರ್ಜಿ ಅವರನ್ನು ಹತ್ಯೆಗೈದರೆ 1 ಕೋಟಿ ರೂಪಾಯಿ ಕೊಡುವುದಾಗಿ ಆಫರ್ ನೀಡಲಾಗಿತ್ತು.ಅಲ್ಲದೇ  ಪತ್ರದಲ್ಲಿ ಅವರನ್ನು ಮಾಟಗಾತಿ ಎಂದು ದೂಷಿಸಲಾಗಿದೆ.


ಈ ಪತ್ರ ಪಕ್ಷದವರಲ್ಲಿ ಆತಂಕವನ್ನು ಸೃಷ್ಟಿ ಮಾಡಿದ್ದು, ಈಗಾಗಲೇ  ಈ ಪತ್ರವನ್ನು ಸೆರಾಂಪುರ ಪೊಲೀಸರಿಗೆ ನೀಡಲಾಗಿದೆ. ರಾಜೀವ್ ಕಿಲ್ಲಾ ಎಂಬುವವರ ಸಹಿ, ಮೂರು ಫೋನ್ ನಂಬರ್‌ಗಳಿರುವ ಪತ್ರದಲ್ಲಿ ಬರೆದವರ ವಿಳಾಸವನ್ನು ಸಹ ಉಲ್ಲೇಖಿಸಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಗಿರೀಶ್ ಕಾರ್ನಾಡ್ ನಿಧನಕ್ಕೆ ಗಣ್ಯರ ಸಂತಾಪ