Select Your Language

Notifications

webdunia
webdunia
webdunia
webdunia

ಆ ಒಂದು ಕ್ಷಣ ಎಲ್ಲರಿಗೂ ಶಾಕ್ ನೀಡಿದ್ದ ಕರುಣಾನಿಧಿ!

ಆ ಒಂದು ಕ್ಷಣ ಎಲ್ಲರಿಗೂ ಶಾಕ್ ನೀಡಿದ್ದ ಕರುಣಾನಿಧಿ!
ಚೆನ್ನೈ , ಸೋಮವಾರ, 30 ಜುಲೈ 2018 (10:12 IST)
ಚೆನ್ನೈ: ಅನಾರೋಗ್ಯದಿಂದ ಆಸ್ಪತ್ರೆ ಸೇರಿರುವ ಡಿಎಂಕೆ ಮುಖ್ಯಸ್ಥ, ತಮಿಳುನಾಡು ಮಾಜಿ ಸಿಎಂ ಕರುಣಾನಿಧಿ ನಿನ್ನೆ ರಾತ್ರಿ ಒಂದು ಕ್ಷಣ ವೈದ್ಯರು, ಕುಟುಂಬಸ್ಥರನ್ನೂ ಆತಂಕಕ್ಕೀಡು ಮಾಡಿದರು.

ನಿನ್ನೆ ರಾತ್ರಿ ಕರುಣಾನಿಧಿ ಆರೋಗ್ಯದಲ್ಲಿ ತೀವ್ರ ಏರುಪೇರಾಗಿದ್ದು ಇಡೀ ಆಸ್ಪತ್ರೆಯಲ್ಲಿ ಆತಂಕದ ವಾತಾವರಣ ಸೃಷ್ಟಿಯಾಯಿತು. ಕರುಣಾನಿಧಿ ಪತ್ನಿ, ಮಕ್ಕಳು ಸೇರಿದಂತೆ, ಡಿಎಂಕೆ ನಾಯಕರು ಆಸ್ಪತ್ರೆಗೆ ಧಾವಿಸಿದ್ದು ನೋಡಿ ಹೊರಗಡೆ ಇದ್ದ ಅಭಿಮಾನಿಗಳಿಗೆ ಏನಾಯಿತೋ ಎಂಬ ಆತಂಕ ಮೂಡಿತು.

ಸ್ವತಃ ತಮಿಳುನಾಡು ಸಿಎಂ ಪಳನಿಸ್ವಾಮಿ ತಮ್ಮ ಕೊಯಂಬತ್ತೂರು ಪ್ರವಾಸ ಮೊಟಕುಗೊಳಿಸಿ ಆಸ್ಪತ್ರೆಯತ್ತ ಧಾವಿಸಿದರು. ಇದೆಲ್ಲದರ ನಡುವೆ ಕರುಣಾನಿಧಿಗೆ ಏನಾಯಿತೋ ಎನ್ನುವ ಆತಂಕ ಜೋರಾಯಿತು.

ಕೊನೆಗೆ ಅವರ ಆರೋಗ್ಯದಲ್ಲಿ ಅರೆ ಕ್ಷಣ ಹಿನ್ನಡೆಯಾದರೂ, ಈಗ ಸಹಜ ಸ್ಥಿತಿಯತ್ತ ಮರಳುತ್ತಿದ್ದಾರೆ ಎಂದು ವೈದ್ಯರು ಹೇಳಿಕೆ ಬಿಡುಗಡೆ ಮಾಡಿದರೂ ಅಭಿಮಾನಿಗಳು ನಂಬಲಿಲ್ಲ. ಕೊನೆಗೆ ಪುತ್ರ ಸ್ಟಾಲಿನ್ ಹೇಳಿಕೆ ನೀಡಿ ಅಭಿಮಾನಿಗಳಿಗೆ ಶಾಂತರಾಗಿರುವಂತೆ ಮನವಿ ಮಾಡಿದರು.

ಇಂದೂ ಕೂಡಾ ಸಾಕಷ್ಟು ರಾಜಕೀಯ ಗಣ್ಯರು ಆಸ್ಪತ್ರೆಗೆ ಭೇಟಿ ನೀಡುತ್ತಿದ್ದಾರೆ. ಇನ್ನು, ಬೆಂಬಲಿಗರು ಇನ್ನೂ ಆಸ್ಪತ್ರೆಯ ಮುಂದೆ ಜಮಾಯಿಸಿದ್ದಾರೆ. ಪುತ್ರ ಸ್ಟಾಲಿನ್ ಈಗಲೂ ಆಸ್ಪತ್ರೆಯಲ್ಲೇ ಬೀಡುಬಿಟ್ಟಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

Share this Story:

Follow Webdunia kannada

ಮುಂದಿನ ಸುದ್ದಿ

‘ನಮಗೆ ತಲೈವಾ ವಾಪಸ್ ಕೊಡಿ’ ಕರುಣಾನಿಧಿಗಾಗಿ ಅಭಿಮಾನಿಗಳಿಂದ ಮೃತ್ಯುದೇವನಿಗೇ ಸವಾಲು!