Select Your Language

Notifications

webdunia
webdunia
webdunia
webdunia

‘ನಮಗೆ ತಲೈವಾ ವಾಪಸ್ ಕೊಡಿ’ ಕರುಣಾನಿಧಿಗಾಗಿ ಅಭಿಮಾನಿಗಳಿಂದ ಮೃತ್ಯುದೇವನಿಗೇ ಸವಾಲು!

‘ನಮಗೆ ತಲೈವಾ ವಾಪಸ್ ಕೊಡಿ’ ಕರುಣಾನಿಧಿಗಾಗಿ ಅಭಿಮಾನಿಗಳಿಂದ ಮೃತ್ಯುದೇವನಿಗೇ ಸವಾಲು!
ಚೆನ್ನೈ , ಸೋಮವಾರ, 30 ಜುಲೈ 2018 (09:57 IST)
ಚೆನ್ನೈ: ತೀವ್ರ ಅನಾರೋಗ್ಯದಿಂದಾಗಿ ಚೆನ್ನೈನ ಕಾವೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಡಿಎಂಕೆ ಮುಖ್ಯಸ್ಥ, ತಮಿಳುನಾಡು ಮಾಜಿ ಸಿಎಂ ಕರುಣಾನಿಧಿಗಾಗಿ ಅವರ ಅಭಿಮಾನಿಗಳು ಅನ್ನ ನೀರಿಲ್ಲದೇ ಕಾಯುತ್ತಿದ್ದಾರೆ.

ಕರುಣಾನಿಧಿ ಆರೋಗ್ಯ ಸ್ಥಿತಿ ಗಂಭಿರವಾದ ಸುದ್ದಿ ತಿಳಿಯುತ್ತಿದ್ದಂತೆ ಕಾವೇರಿ ಆಸ್ಪತ್ರೆ ಮುಂದೆ ಮತ್ತು ಗೋಪಾಲಪುರಂನ ಕರುಣಾನಿಧಿ ನಿವಾಸದ ಬಳಿ ಜಮಾಯಿಸಿದ ಜನ ‘ಯಮರಾಜ ಹೋಗು, ನಮಗೆ ನಮ್ಮ ತಲೈವಾ ಬೇಕು’ ಎಂದು ಮೃತ್ಯು ದೇವನಿಗೇ ಘೋಷಣೆ ಕೂಗಿ ಸವಾಲ್ ಹಾಕಿದ್ದಾರೆ!

ಆಸ್ಪತ್ರೆ ಮುಂದೆ ಅನ್ನ ನೀರಿಲ್ಲದೆ ಕಳೆದ ಎರಡು ದಿನಗಳಿಂದ ನಿಂತಿದ್ದೇವೆ. ನಮಗೆ ತಲೈವಾ ಆರೋಗ್ಯದ ಬಗ್ಗೆ ಸರಿಯಾದ ಮಾಹಿತಿ ಕೊಡಿ. ಯಾಕೆ ಯಾರೂ ಸರಿಯಾಗಿ ಏನೂ ಹೇಳುತ್ತಿಲ್ಲ. ನಮಗೆ ನಮ್ಮ ತಲೈವಾ ಆರೋಗ್ಯವಾಗಿ ಸಿಕ್ಕರೆ ಸಾಕು ಎಂದು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುವ ದೃಶ್ಯ ಸಾಮಾನ್ಯವಾಗಿದೆ. ಈ ನಡುವೆ ಅಭಿಮಾನಿಗಳ ನೂಕು ನುಗ್ಗಲು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

Share this Story:

Follow Webdunia kannada

ಮುಂದಿನ ಸುದ್ದಿ

ಶೀರೂರು ಶ್ರೀಗಳ ಸಾವಿನ ಅನುಮಾನಗಳಿಗೆ ಇಂದು ಬೀಳಲಿದೆಯಾ ತೆರೆ?!